ದಿನಭವಿಷ್ಯ: ಇಂದು ಶುಭ ಶುಕ್ರವಾರ ಯಾವ ರಾಶಿಗೆ ಲಾಭ? ಯಾರಿಗೆ ನಷ್ಟ?

ಮೇಷ
ಸಹೋದ್ಯೋಗಿಯಿಂದ  ಸಮಸ್ಯೆ. ನಿಮ್ಮ ಕುರಿತು ದ್ವೇಷ ಕಾರಬಹುದು. ಹೊಂದಾಣಿಕೆಯಿಂದ ಕಾರ್ಯ ನಿರ್ವಹಿಸಿ. ಈ ದಿನ ಸಂಘರ್ಷ ಒಳಿತು ತರಲಾರದು.

ವೃಷಭ
ವೃತ್ತಿಯಲ್ಲಿ ಸೌಹಾರ್ದ ವಾತಾವರಣ. ಬಿಕ್ಕಟ್ಟು ಶಮನ. ಮನಸ್ತಾಪ ನಿವಾರಣೆ. ಮನೆಯಲ್ಲೂ  ಖುಷಿ ತರುವ ಮನಸ್ಥಿತಿ. ಕುಟುಂಬ ಸದಸ್ಯರಿಂದ ಸಹಕಾರ.

ಮಿಥುನ
ಸಂಗಾತಿ ಜತೆಗೆ ಅಹಂಭಾವ ಬಿಡಿ. ನಾನು ಬಗ್ಗಬಾರದು ಎಂಬ ಛಲ ಒಳಿತಲ್ಲ. ಹೊಂದಾಣಿಕೆ ಎಲ್ಲಕ್ಕಿಂತ ಮುಖ್ಯ. ವಾಗ್ವಾದಕ್ಕೆ ಆಸ್ಪದ ಕೊಡದಿರಿ.

ಕಟಕ
ಕೆಲಸದಲ್ಲಿ ಬಿಡುವಿಲ್ಲದ ಒತ್ತಡ. ಹೊಣೆಗಾರಿಕೆ ಹೆಚ್ಚಳ. ಎಲ್ಲರ ಜತೆ ಉತ್ತಮ ಸಂವಹನ ಸಾಧಿಸಿ. ತಪ್ಪಭಿಪ್ರಾಯ ಬಿಕ್ಕಟ್ಟು ಉಂಟು ಮಾಡಬಹುದು.

ಸಿಂಹ
ವೃತ್ತಿ ಮತ್ತು ಖಾಸಗಿ ಬದುಕಿನಲ್ಲಿ ಉನ್ನತಿ ಸಾಧಿಸಲು ಅವಕಾಶ ಒದಗಲಿದೆ. ಅದನ್ನು ಸರಿಯಾಗಿ ಬಳಸಿಕೊಳ್ಳುವುದು ನಿಮ್ಮ ಹೊಣೆಗಾರಿಕೆ.

ಕನ್ಯಾ
ಪ್ರತೀ ವಿಷಯದಲ್ಲೂ ಇಂದು ಎಚ್ಚರಿಕೆಯಿಂದ ಹೆಜ್ಜೆಯಿಡಿ. ನಿಮಗೆ ಹಿನ್ನಡೆಯಾಗುವ ಬೆಳವಣಿಗೆ ಸಂಭವ. ನೈತಿಕ ಚೌಕಟ್ಟು ಮೀರದಿರಿ.

ತುಲಾ
ವೃತ್ತಿಯಲ್ಲಿ ಬದಲಾವಣೆ ಉಂಟಾದೀತು. ನಿಮ್ಮ ಹೊಣೆ ಸರಿಯಾಗಿ ನಿಭಾಯಿಸಿ. ಮುಖ್ಯ ಕಾರ್ಯ ಮಾಡುವ ಮುನ್ನ ಸರಿಯಾಗಿ ಆಲೋಚಿಸಿರಿ.

ವೃಶ್ಚಿಕ
ಉದ್ಯೋಗದಲ್ಲಿ ನೀವು ಹೆಚ್ಚುವರಿ ಜವಾಬ್ದಾರಿ ಹೊರಬೇಕಾಗುವುದು. ಕೆಲವರು ನಿಮ್ಮನ್ನೇ ಮುಂದೆ ಮಾಡುತ್ತಾರೆ. ಕೆಲಸಗಳ್ಳರಿಗೆ ನೆರವು ನೀಡಲು ಹೋಗದಿರಿ.

ಧನು
ನಿಮಗೆ ಪೂರಕವಾದ ದಿನ. ಮನೆಯಲ್ಲಿ ಭಾವನಾತ್ಮಕ ಸಂಘರ್ಷ ಉಂಟಾದರೂ ಬೇಗನೆ  ಸರಿ ಹೋಗುವುದು. ಆಪ್ತ ಬಂಧುವಿನಿಂದ ಶುಭ ಸುದ್ದಿ ಕೇಳುವಿರಿ.

ಮಕರ
ವಿಶ್ವಾಸ ಹೆಚ್ಚಿಸುವ ಬೆಳವಣಿಗೆ. ಪ್ರಮುಖ ನಿರ್ಧಾರದಲ್ಲಿ ಅಚಲವಾಗಿರಿ. ಅನ್ಯರ ಪ್ರಭಾವಕ್ಕೆ ಒಳಗಾಗಿ ನಿಲುವು ಬದಲಿಸಬೇಡಿ. ಕೌಟುಂಬಿಕ ಶಾಂತಿ.

ಕುಂಭ
ನಿಮ್ಮ ಇಷ್ಟದ ವ್ಯಕ್ತಿಯ ಜತೆ ಭಾವನಾತ್ಮಕವಾಗಿ ಹತ್ತಿರವಾಗುವಿರಿ. ಸಂಬಂಧ ವೃದ್ಧಿ. ಆರ್ಥಿಕವಾಗಿ ನಿಮ್ಮ ಹೂಡಿಕೆ ಉತ್ತಮ ಫಲ ನೀಡುವುದು.

ಮೀನ
ಹೆಚ್ಚು ಕೆಲಸ, ಹೆಚ್ಚು ಒತ್ತಡ, ಹೆಚ್ಚು ಕಿರಿಕಿರಿ. ಇದು ಇಂದಿನ ನಿಮ್ಮ ದಿನಚರಿ. ಮನೆಯಲ್ಲಿ ವಾಗ್ವಾದ ನಡೆಯಬಹುದು. ಮನಶ್ಯಾಂತಿ ಹಾಳು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!