ದಿನಭವಿಷ್ಯ: ಇಂದು ಈ ರಾಶಿಯವರಿಗೆ ಲಕ್ಷ್ಮಿ ಕೃಪೆ, ಧನ ವೃದ್ಧಿ!

ಮೇಷ
ವೃತ್ತಿಯಲ್ಲಿ, ಹಿರಿಯರ ಎದುರು ವಿನಯದಿಂದ ನಡಕೊಳ್ಳಿ. ಕುಟುಂಬ ಸದಸ್ಯರ ಜತೆ ಹೆಚ್ಚು ಕಾಲ ಕಳೆಯಿರಿ. ಅವರಿಗೆ ನಿಮ್ಮ ಕಾಳಜಿಯ ಅಗತ್ಯ ಬೀಳಲಿದೆ.

ವೃಷಭ
ವೃತ್ತಿಯಲ್ಲಿ ನಿಮ್ಮ ಗುರಿ ಸಾಧಿಸುವಿರಿ. ಗ್ರಹಗತಿ ನಿಮಗೆ ಪೂರಕ ಆಗಿರುವುದರಿಂದ ಅದರ ಸಂಪೂರ್ಣ ಲಾಭ ಪಡೆಯಿರಿ. ಆರ್ಥಿಕ ಲಾಭವೂ ಸಿಗಲಿದೆ.

ಮಿಥುನ
ನಿಮ್ಮ ಕೆಲಸವನ್ನು ಇತರರ ಜತೆ ಹಂಚಿಕೊಳ್ಳುವುದು ಮುಖ್ಯ. ಅದರಿಂದ ಸುಲಭವಾಗಿ ಗುರಿ ಸಾಧಿಸಬಲ್ಲಿರಿ. ಆರ್ಥಿಕ ಬಿಕ್ಕಟ್ಟು ಸಂಭವ.

ಕಟಕ
ಕುಟುಂಬ ಸದಸ್ಯರ ಜತೆ ನಿಮ್ಮ ಭಾವನೆ ಹಂಚಿಕೊಳ್ಳಿ. ಅವರೇ ನಿಮ್ಮನ್ನು ಸರಿಯಾಗಿ ಅರ್ಥ ಮಾಡಿಕೊಳ್ಳುವವರು. ಕೆಲಸದಲ್ಲಿ ತಪ್ಪು ಎಸಗದಂತೆ ನೋಡಿ.

ಸಿಂಹ
ಸಮಯಕ್ಕೆ ಸರಿಯಾಗಿ ಕಾರ್ಯ ಮುಗಿಯದು. ನಿಮ್ಮ ಗ್ರಹಗತಿಯೇ ಇಂದು ಹಾಗಿದೆ. ಎಲ್ಲ ಕೆಲಸದಲ್ಲಿ ವಿಳಂಬ. ಕೌಟುಂಬಿಕ ಶಾಂತಿ ಸಮಾಧಾನ ತರುವುದು.

ಕನ್ಯಾ
ಬಂಧುಗಳ ಜತೆ ಮಾತಿನ ಚಕಮಕಿ ಬೇಡ. ಸಣ್ಣ ವಿಷಯಗಳನ್ನು ಕಡೆಗಣಿಸಿ. ಆರ್ಥಿಕ ಒತ್ತಡ ಹೆಚ್ಚಲಿದೆ. ಆರೋಗ್ಯದ ಕಡೆ ಗಮನ ಹರಿಸಿರಿ.

ತುಲಾ
ಕೆಲಸದಲ್ಲಿ ಶಿಸ್ತು ಅವಶ್ಯ. ವೃತ್ತಿಯಲ್ಲಿ ಮನಸ್ತಾಪ ಸಂಭವ. ವಾಗ್ವಾದದಿಂದ ದೂರವಿರಿ. ಕೆಲದಿನ ಸಾತ್ವಿಕ ಆಹಾರವನ್ನು ಸೇವಿಸಿ. ಆರೋಗ್ಯ ಕಾಪಾಡಿರಿ.

ವೃಶ್ಚಿಕ
ದೈಹಿಕ ಆರೋಗ್ಯದಷ್ಟೆ ಮಾನಸಿಕ ಆರೋಗ್ಯವೂ ಮುಖ್ಯ. ಅದನ್ನು ಅರಿಯಿರಿ. ಸಣ್ಣ ವಿಷಯಕ್ಕೆ ಮನಸ್ಸು ಕೆಡಿಸಿಕೊಳ್ಳದಿರಿ. ಶಾಂತಚಿತ್ತತೆ ಇರಲಿ.

ಧನು
ಮುಖ್ಯ ವಿಚಾರದಲ್ಲಿ ಕೆಲವರ ಜತೆ ಭಿನ್ನಾಭಿ ಪ್ರಾಯ ಉಂಟಾದೀತು. ಅದನ್ನು ವಿಕೋಪಕ್ಕೆ ಕೊಂಡೊಯ್ಯಬೇಡಿ. ಸಮಾಧಾನಚಿತ್ತ ಮುಖ್ಯ.

ಮಕರ
ಹೊಸ ವ್ಯವಹಾರದಲ್ಲಿ ಹೂಡಿಕೆಯಿಂದ ಲಾಭ ಸಿಗಲಿದೆ. ಆರ್ಥಿಕ ಪರಿಸ್ಥಿತಿ ಸುಧಾರಣೆ. ಕುಟುಂಬಸ್ಥರ ಜತೆ ಆತ್ಮೀಯ ಕಾಲಕ್ಷೇಪ. ಆರೋಗ್ಯ ಸುಸ್ಥಿರ.

ಕುಂಭ
ಸಂಘರ್ಷವನ್ನು ಸಮಾಧಾನದಿಂದ ನಿಭಾಯಿಸಿ. ಕೋಪ, ಅಸಹನೆ ಫಲ ನೀಡದು. ಕೌಟುಂಬಿಕ ಪರಿಸರ ಸಮಾಧಾನಕರ. ಆರ್ಥಿಕ ಪರಿಸ್ಥಿತಿ ಸುಧಾರಣೆ.

ಮೀನ
ಆರೋಗ್ಯಪೂರ್ಣ ಆಹಾರ ಸೇವಿಸಿ. ಇಲ್ಲವಾದರೆ ಆರೋಗ್ಯ ಕೆಡಬಹುದು. ಕುಟುಂಬ ಸದಸ್ಯರ ಆದರಾತಿಥ್ಯ ಮನಸ್ಸಿಗೆ ನಿರಾಳತೆ ತರುವುದು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!