ದಿನಭವಿಷ್ಯ: ಗುರು-ಶುಕ್ರನ ಸಂಯೋಗದಿಂದಾಗಿ ಈ ರಾಶಿಗೆ ಅದೃಷ್ಟ

ಮೇಷ
ಮಾನಸಿಕ ಶಾಂತಿ ಹುಡುಕುತ್ತಿದ್ದೀರಿ. ಧಾರ್ಮಿಕ ಭಾವ ಹೆಚ್ಚುವುದು.ಹಳೆಯ ಕೆಲವು ವಿಷಯ ಇತ್ಯರ್ಥ ಮಾಡುವಲ್ಲಿ ಸಫಲ. ಭಾವುಕ ಸನ್ನಿವೇಶ.

ವೃಷಭ
ನಿಮ್ಮ ಜೀವನದ ಮೇಲೆ ನಿಯಂತ್ರಣ ಸಾಧಿಸುವಿರಿ. ನಿಮ್ಮನ್ನು ಕಾಡುತ್ತಿದ್ದ ಹಳೆಯ ಜಂಜಾಟಗಳಿಗೆ ಮುಕ್ತಿ ಕಾಣಿಸುವಿರಿ. ಮಾನಸಿಕ ನಿರಾಳತೆ.

ಮಿಥುನ
ಭಾವನೆಗಳ ಏರುಪೇರು.ಕೋಪ, ನಿರುತ್ಸಾಹ ಕಾಡಬಹುದು.ಕುಟುಂಬಸ್ಥರು ಅಥವಾ ಸ್ನೇಹಿತರ ಜತೆ ಕಲಹವಾದೀತು. ಸಹನೆ ಕಾಯ್ದುಕೊಳ್ಳಿ.

ಕಟಕ
ನೀವು ಬಯಸಿದಂತೆ ಎಲ್ಲವೂ ಸಾಗದಿದ್ದರೆ ನಿರುತ್ಸಾಹ ಬೇಡ. ಮತ್ತೆ ಪ್ರಯತ್ನ ಮಾಡಿರಿ. ಪ್ರೀತಿಪಾತ್ರರಿಂದ ನಿಮಗೆ ಬೆಂಬಲ ದೊರೆಯುವುದು.

ಸಿಂಹ
ಕಾಡುವ ಸಮಸ್ಯೆ ಪರಿಹಾರಕ್ಕೆ ಎಲ್ಲೋ ಹುಡುಕಬೇಕಿಲ್ಲ. ನಿಮ್ಮೊಳಗೇ ಪರಿಹಾರವಿದೆ. ಮುಖ್ಯ ಕಾರ್ಯ ಮಾಡಲು ಮೀನಮೇಷ ಬೇಡ.

ಕನ್ಯಾ
ಹಳೆಯ ಸಮಸ್ಯೆ ಪರಿಹರಿಸಲು ಸಮರ್ಥ.ಮನಶ್ಯಾಂತಿ ಕದಡುವ ವಿಷಯದಿಂದ ದೂರವಿರಿ. ಗತಕಾಲದ ಕಹಿ ನೆನಪು ಮರೆಯುವುದೇ ಸೂಕ್ತ.

ತುಲಾ
ಕುಟುಂಬ ಜೀವನ ಮತ್ತು ವೃತ್ತಿಯ ಮಧ್ಯೆ ಸಮತೋಲನ ಸಾಧಿಸಿ. ಯಾವುದನ್ನೂ ಕಡೆಗಣಿಸದಿರಿ.ನಿಮ್ಮ ಸ್ವಭಾವಕ್ಕೆ ಕೆಲವರ ಟೀಕೆ ಕೇಳಿಬಂದೀತು.

ವೃಶ್ಚಿಕ
ಎತ್ತೆತ್ತಲೋ ಚದುರಿದ್ದ  ವಿಷಯಗಳೆಲ್ಲ  ಇಂದು ಸುಸ್ಥಿತಿಗೆ ಬರುವುದು. ಗೊಂದಲ ನಿವಾರಣೆ. ಸಮಸ್ಯೆಗೆ ಪರಿಹಾರ ಕಾಣಲು ಶಕ್ತರಾಗುವಿರಿ. ಕೌಟುಂಬಿಕ ಸಹಕಾರ.

ಧನು
ನಿಮಗಿಂದು ಪೂರಕ ದಿನ. ನಿಮ್ಮ ಗುರಿಗೆ ಅಡ್ಡವಾಗಿರುವ ಅಡ್ಡಿ ನಿಭಾಯಿಸುವಿರಿ. ಮನಸ್ಸು ನಿರಾಳಗೊಳಿಸುವ ಬೆಳವಣಿಗೆ ಸಂಭವ.

ಮಕರ
ಕೆಲದಿನಗಳಿಂದ ಕಾಡುತ್ತಿದ್ದ ಸಮಸ್ಯೆ ಪರಿಹಾರ.ಸವಾಲನ್ನು ಶಾಂತಚಿತ್ತದಿಂದ ಎದುರಿಸಿ. ಉತ್ಸಾಹ ತುಂಬುವ ಬೆಳವಣಿಗೆ ಉಂಟಾಗುವುದು.

ಕುಂಭ
ಕೆಲಸದಲ್ಲಿ ಏಕಾಗ್ರತೆ ಮೂಡದು. ಬೇರೆ ವಿಷಯಗಳು ಮನಸ್ಸನ್ನು ಕಾಡುತ್ತವೆ. ಉನ್ನತ ಅಧಿಕಾರಿಗಳ ಜತೆ ವಾಗ್ವಾದಕ್ಕೆ ಇಳಿಯದಿರಿ.

ಮೀನ
ಹೊಸ ಚಿಂತನೆ ಬೆಳೆಸಿಕೊಳ್ಳಿ. ಹಳೆಯ ವಿಷಯಗಳನ್ನೆ ಮತ್ತೆ ಮತ್ತೆ ಕೆದಕಲು ಹೋಗಬೇಡಿ. ನಿಮ್ಮನ್ನು ಕಾಡುವ ಜನರಿಂದ ದೂರವಿರಿ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!