ದಿನಭವಿಷ್ಯ: ಈ ರಾಶಿಯವರಿಗೆ ಸಂದಿಗ್ಧ ಪರಿಸ್ಥಿತಿ ಎದುರಾಗಲಿದೆ, ಏನು ಮಾಡಿದರೆ ಉತ್ತಮ?

ಮೇಷ
ಕೌಟುಂಬಿಕ ಬಿಕ್ಕಟ್ಟು ಪರಿಹಾರಗೊಳ್ಳುವ ಸಂಕೇತ ತೋರುವುದು. ಅದಕ್ಕೆ ಮುಖ್ಯವಾಗಿ ಬೇಕಾಗಿರುವುದು ಹೊಂದಾಣಿಕೆ. ಸಹನೆಯಿಂದ ವರ್ತಿಸಿ.

ವೃಷಭ
ಮುಖ್ಯ ವಿಷಯದಲ್ಲಿ ನಿಮ್ಮ ಧೋರಣೆ ಬದಲಿಸಬೇಕಾದೀತು. ಇಷ್ಟವಿಲ್ಲದ ಕಾರ್ಯ ಮಾಡಲು ಹೋಗದಿರಿ. ಇತರರ ಒತ್ತಡವನ್ನು ನಿಭಾಯಿಸಿರಿ.

ಮಿಥುನ
ಸಮಸ್ಯೆಗಳ ದಿನ. ಅದರಿಂದ ಬಸವಳಿದು ಹೋಗುವಿರಿ. ಸಾಂತ್ವನ ನೀಡುವ ವ್ಯಕ್ತಿಗಾಗಿ ಹಾತೊರೆಯುವಿರಿ. ಹಿರಿಯರ ಜತೆ ವಾಗ್ವಾದ ಬೇಡ.

ಕಟಕ
ಆರೋಗ್ಯ ಸಮಸ್ಯೆ ಪರಿಹಾರಗೊಳ್ಳಲಿದೆ. ಮನಸ್ಸಿಗೆ ನಿರಾಳತೆ. ಮನೆಯ ವಾತಾವರಣ ಮನಸ್ಸು ಹಿಗ್ಗಿಸುವುದು. ಬಂಧುಗಳಿಂದ ಕೆಲಸಕ್ಕೆ ಸಹಕಾರ.

ಸಿಂಹ
ಹೊಸ ವ್ಯವಹಾರಕ್ಕೆ ಕೈ ಹಚ್ಚಲು ಸೂಕ್ತ ಅವಕಾಶ ದೊರಕಲಿದೆ. ವೃತ್ತಿಯಲ್ಲಿ ಹಾಗೂ ಮನೆಯಲ್ಲಿ ಕಾರ್ಯಗಳೆಲ್ಲ ಸಲೀಸು. ಅಡ್ಡಿಗಳ ನಿವಾರಣೆ. ಉತ್ಸಾಹದ ದಿನ.

ಕನ್ಯಾ
ಮನಸ್ಸಿಗೆ ಹೊಸತನ ತುಂಬುವ ಬೆಳವಣಿಗೆ ಉಂಟಾಗಲಿದೆ. ನಿಮ್ಮ ಬಹುದೊಡ್ಡ ಬಯಕೆ ಈಡೇರಲಿದೆ. ಆಪ್ತ ಸಂಬಂಧ ದೀರ್ಘಾವಧಿ ಬೆಳೆಯಲಿದೆ.

ತುಲಾ
ಕೆಲಸದಲ್ಲಿ ಅಡತಡೆ ಎದುರಿಸುವಿರಿ. ಹಾಗಾಗಿ ನಿಮ್ಮ ಕೆಲಸ ಸರಾಗವಾಗಿ ನಡೆಯದು. ಕೆಲವರ ಅಸಹಕಾರ ಎದುರಿಸುವಿರಿ. ಖರ್ಚೂ ಹೆಚ್ಚಲಿದೆ.

ವೃಶ್ಚಿಕ
ಇಂದಿನ ಕಾರ್ಯ, ವ್ಯವಹಾರ ಯಶಸ್ವಿಯಾಗಿ ನೆರವೇರಲಿದೆ. ಆಪ್ತ ಬಂಧುವಿನಿಂದ ಶುಭ ಸುದ್ದಿ ಕೇಳುವಿರಿ. ಆರ್ಥಿಕ ಸ್ಥಿತಿ ಉತ್ತಮ. ಕೌಟುಂಬಿಕ ನೆಮ್ಮದಿ.

ಧನು
ಯಾವುದೋ ವಿಷಯದಲ್ಲಿ ಭಾವನಾತ್ಮಕ ಏರುಪೇರು ಉಂಟಾಗಲಿದೆ. ಆತ್ಮೀಯರ ಜತೆಗೆ ಮುನಿಸು ಉಂಟಾದೀತು. ತಾಳ್ಮೆಯಿರಲಿ.

ಮಕರ
ಇತರರ ಮನೋಭಾವ ಸರಿಯಾಗಿ ಅರ್ಥೈಸಿ ವ್ಯವಹರಿಸಿರಿ. ಕೆಲವರು ಮುಖವಾಡ ತೊಟ್ಟು ವ್ಯವಹರಿಸುವರು. ಅವರ ಕುರಿತು ಎಚ್ಚರದಿಂದಿರಿ.

ಕುಂಭ
ವೃತ್ತಿಯಲ್ಲಿ ಗಂಭೀರತೆ ಮುಖ್ಯ. ಎಲ್ಲವನ್ನೂ ಲಘುವಾಗಿ ಪರಿಗಣಿಸಿದರೆ ಸಮಸ್ಯೆಗೆ ಸಿಲುಕುವಿರಿ. ಸುಲಭ ಕಾರ್ಯವು ಕಷ್ಟವಾಗಬಹುದು.

ಮೀನ
ನಕಾರಾತ್ಮಕ ಚಿಂತನೆ ಮನದಿಂದ ನಿವಾರಿಸಿ. ಅಂತಹ ಮನಸ್ಥಿತಿ ಒಳ್ಳೆ ಕಾರ್ಯವನ್ನೂ ವಿಫಲಗೊಳಿಸಬಹುದು. ಮೈನೋವಿನಂತಹ  ಸಮಸ್ಯೆ ಸಂಭವ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!