ದಿನಭವಿಷ್ಯ: ದುಡುಕಿ ಮಾತನಾಡಿ ಬರಬೇಕಾದುದನ್ನು ಕಳೆದುಕೊಳ್ಳುವಿರಿ, ಲಾಭದಿಂದ ಸಂತಸ

ಮೇಷ
ನಿಮಗೆ ಇಷ್ಟವಿಲ್ಲದ ಬೆಳವಣಿಗೆ ಉಂಟಾದೀತು.   ಆದರೆ ಉತ್ಸಾಹ ಕಳಕೊಳ್ಳದಿರುವುದು ಮುಖ್ಯ. ಖರ್ಚು ಹೆಚ್ಚಲಿದೆ. ಆರ್ಥಿಕ ಒತ್ತಡ.

ವೃಷಭ
ಪ್ರಮುಖ ಕಾರ್ಯ ಯೋಜಿಸಿದ್ದರೆ ಇಂದು ಕಾರ್ಯಗತ ಮಾಡಿ. ಕಾಲ ನಿಮಗೆ ಪ್ರಶಸ್ತವಿದೆ. ಕೌಟುಂಬಿಕ ವಾಗ್ವಾದ ನಡೆದರೂ ಬಳಿಕ ಶಾಂತಿ.

ಮಿಥುನ
ಹೆಚ್ಚು  ಆಶಾವಾದದ ದಿನ. ಆರ್ಥಿಕ ಪ್ರಗತಿ.   ಅನಿರೀಕ್ಷಿತ ಧನ ಸಂಚಯ. ವಿದ್ಯಾರ್ಥಿಗಳಿಗೆ ಪೂರಕ. ಆರೋಗ್ಯ ಸಮಸ್ಯೆ ನಿವಾರಣೆ.

ಕಟಕ
ನೆಮ್ಮದಿ ಕಳಕೊಳ್ಳುವ ಪ್ರಸಂಗ ಉಂಟಾದೀತು. ನಿಮ್ಮ ಕೆಲಸ ಸಾಧಿಸಲು ಹೆಚ್ಚಿನ ಶ್ರಮ ಬೇಕಾಗಲಿದೆ. ಮನೆಯ ವಾತಾವರಣ ಅಸಹನೀಯ ಎನಿಸೀತು.

ಸಿಂಹ
ಮನೆಯವರ ಮಾತುಗಳಿಗೆ ಸಹನೆ ಯಿಂದ ಕಿವಿಗೊಡಿ. ಸೌಹಾರ್ದ ವಾತಾವರಣ ಕಾಪಾಡಿ. ವಾಗ್ವಾದದಿಂದ ಲಾಭವಿಲ್ಲ.

ಕನ್ಯಾ
ಸಂತೋಷ ಮತ್ತು ಬೇಸರ ಎರಡಕ್ಕೂ ಸಾಕ್ಷಿಯಾಗುವಿರಿ.  ಸಮಯಕ್ಕೆ ಸರಿಯಾಗಿ ಆಹಾರ ಸೇವಿಸಿ. ಆರೋಗ್ಯಕ್ಕೆ ಗಮನ ಕೊಡಿ.

ತುಲಾ
ಮನೆಯಲ್ಲಿ ಶಾಂತಿ ನೆಲೆಸುವಂತಾಗಲು ನೀವಿಂದು ಹೊಂದಾಣಿಕೆ ಮಾಡಿಕೊಳ್ಳಬೇಕು. ನಿಮ್ಮ ನಿಲುವಿಗೆ ಹಠ ಹಿಡಿಯದಿರಿ.

ವೃಶ್ಚಿಕ
ಮಾನಸಿಕ ಒತ್ತಡ ಕಾಡಲಿದೆ. ಧಾರ್ಮಿಕ ಸಾಂಗತ್ಯ ಈ ಒತ್ತಡ ಶಮನಕ್ಕೆ ನೆರವಾಗಲಿದೆ. ಪ್ರೀತಿಯ ವಿಷಯದಲ್ಲಿ ಮಹತ್ವದ ಬೆಳವಣಿಗೆ.

ಧನು
ಭಾವನಾತ್ಮಕ ನಿಯಂತ್ರಣ ಸಾಧಿಸಿ. ಪ್ರಾಕ್ಟಿಕಲ್ ಆಗಿ ಯೋಚಿಸಿ. ನಿಮ್ಮ ನೆಮ್ಮದಿ ಕೆಡಿಸಲು ಕೆಲವರ ಯತ್ನ. ಅದಕ್ಕೆ ಅವಕಾಶ ನೀಡದಿರಿ.

ಮಕರ
ಬಿಕ್ಕಟ್ಟಿಗೆ ಕ್ಷಿಪ್ರವಾಗಿ ಸ್ಪಂದಿಸಿ. ವಿಳಂಬ ಧೋರಣೆ ಸಲ್ಲದು. ಪ್ರತಿಕೂಲ ಸನ್ನಿವೇಶಕ್ಕೆ ಧೈರ್ಯಗೆಡದಿರಿ. ನೆರವೂ ಲಭಿಸಲಿದೆ.

ಕುಂಭ
ಈ ದಿನ ನಿಮಗೆ ಪೂರಕವಾಗಿಲ್ಲ. ಸಂಬಂಧದಲ್ಲಿ ಬಿರುಕು ಮೂಡಬಹುದು. ಉದ್ಯಮದಲ್ಲಿ ಹಿನ್ನಡೆ. ಆರೋಗ್ಯ ಸಮಸ್ಯೆ.

ಮೀನ
ನಿಮಗೆ ಪೂರಕ ದಿನ. ಕಾರ್ಯದಲ್ಲಿ ಪ್ರಗತಿ. ಮನೆಯಲ್ಲಿ ಹೆಚ್ಚುವರಿ ಹೊಣೆ. ಅದನ್ನು ಸರಿಯಾಗಿ ನಿಭಾಯಿಸಲು ಶಕ್ತರಾಗುವಿರಿ.

- Advertisement - Prestige

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!