ದಿನಭವಿಷ್ಯ: ಇಂದು ಈ ರಾಶಿಯವರಿಗಿರುತ್ತೆ ಲಾಭದ ನಿರೀಕ್ಷೆ

ಮೇಷ
ಪಾರಮಾರ್ಥಿಕ ವಿಷಯದತ ಆಸಕ್ತಿ. ನಿಮ್ಮ ಸಮಸ್ಯೆ ಮರೆಯಲು ನೀವು ಕಂಡುಕೊಳ್ಳುವ ದಾರಿ ಅದು. ಸವಾಲು ಎದುರಿಸಲು ಕಲಿಯಿರಿ

ವೃಷಭ
ನಿಷ್ಪಲವೆಂದು ಭಾವಿಸಿದ ಕಾರ್ಯವೊಂದು ಇಂದು ಫಲ ನೀಡಲಿದೆ. ಅದರಿಂದ ನಿರಾಳತೆ, ನೆಮ್ಮದಿ. ಕೌಟುಂಬಿಕ ಸಮಸ್ಯೆ ಪರಿಹಾರ ಕಾಣುವುದು.

ಮಿಥುನ
ಖಾಸಗಿ ಬದುಕಲ್ಲಿ ಉತ್ತಮ ಬೆಳವಣಿಗೆ. ಸಮಸ್ಯೆ ಪರಿಹಾರಕ್ಕೆ ಆಪ್ತ ಬಂಧುಗಳಿಂದ ಸಹಕಾರ. ಮನೆಯ ಸದಸ್ಯರ ಸಲಹೆಗೆ ಕಿವಿಗೊಡಿ.

ಕಟಕ
ನಿಮಗಿಂದು ಜಡತ್ವ ಕಾಡಬಹುದು. ಹುರುಪು ತುಂಬಿಕೊಳ್ಳಿ. ಕೆಲಸದಲ್ಲಿ ವಿಳಂಬ ಬೇಡ. ಉದ್ಯೋಗಾಕಾಂಕ್ಷಿಗಳಿಗೆ ಶುಭ ಬೆಳವಣಿಗೆ.

ಸಿಂಹ
ಬಾಕಿ ಉಳಿದಿರುವ ಕಾರ್ಯ ಪೂರೈಸಲು ಆದ್ಯತೆ ಕೊಡಿ. ಆರೋಗ್ಯ ಸಮಸ್ಯೆಯೊಂದು ಚಿಂತೆಗೆ ಕಾರಣ. ಆರ್ಥಿಕ ಒತ್ತಡ ಹೆಚ್ಚುವುದು.

ಕನ್ಯಾ
ಕೆಲಸದಿಂದ ವಿರಾಮ. ಮನೆಯವರ ಜತೆ ಸಮಯ ಕಳೆಯುವ ಅವಕಾಶ. ಆಹಾರ ಸೇವನೆಯಲ್ಲಿ ಹಿತಮಿತ ಸಾಧಿಸಿ. ಆರೋಗ್ಯ ಕಾಯ್ದುಕೊಳ್ಳಿ.

ತುಲಾ
ಕಠಿಣ ಕಾರ್ಯವೊಂದು ಸುಲಭದಲ್ಲಿ ನೆರವೇರುವುದು ಕೌಟುಂಬಿಕ ಭಿನ್ನಮತ ನಿವಾರಣೆ. ಬಂಧುಗಳಿಂದ ಹಣಕ್ಕೆ ಬೇಡಿಕೆ ಬರಬಹುದು.

ವೃಶ್ಚಿಕ
ಇತರರಿಗೆ ನೆರವು ನೀಡಬೇಕಾದ ಒತ್ತಡಕ್ಕೆ ಸಿಲುಕುವಿರಿ. ಹಣದ ವಿಚಾರದಲ್ಲಿ ಮಾತ್ರ ಎಚ್ಚರಿಕೆ ವಹಿಸಿ. ಇಂದು ಕೊಟ್ಟ ಹಣ ಮರಳಿ ಸಿಗಲಾರದು.

ಧನು
ದೈನಂದಿನ ವ್ಯವಹಾರ ದಲ್ಲಿ ಅನವಶ್ಯ ಒತ್ತಡ ಸೃಷ್ಟಿಸಿಕೊಳ್ಳುವಿರಿ. ಸಮಾಧಾನದಿಂದ ಕಾರ್ಯ ನಿರ್ವಹಿಸಿ. ಬಂಧುವಿನಿಂದ ಕಿರಿಕಿರಿ ಉಂಟಾದೀತು.

ಮಕರ
ವ್ಯವಹಾರ ಮುಖ್ಯ ನಿಜ. ಅದರ ಜತೆಗೇ ಕೌಟುಂಬಿಕ ಹಿತಾಸಕ್ತಿಯೂ ಮುಖ್ಯ. ಯಾವುದೇ ಒಂದನ್ನು ಕಡೆಗಣಿಸುವುದು ಬೇಡ. ಹೊಂದಾಣಿಕೆಯಿರಲಿ.

ಕುಂಭ
ನಿಮ್ಮ ವರ್ತನೆಯಲ್ಲಿ ಬದಲಾವಣೆ ತರುವ ಪ್ರಸಂಗ ಉಂಟಾದೀತು. ರೋಷ , ಅಸಹನೆ ನಿಯಂತ್ರಿಸಿ ಸಮಾಧಾನ ರೂಢಿಸಿಕೊಳ್ಳಿ. ಆರ್ಥಿಕ ಒತ್ತಡ ಹೆಚ್ಚು.

ಮೀನ
ಇತರರ ಜತೆ ವ್ಯವಹರಿಸುವಾಗ ವಿನಯವಿರಲಿ. ಉದ್ಧಟ ವರ್ತನೆ ಫಲ ನೀಡದು. ಟೀಕೆ ಎದುರಿಸುವಿರಿ. ಕೌಟುಂಬಿಕ ಸೌಹಾರ್ದ ಕಾಯ್ದುಕೊಳ್ಳಿ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!