ದಿನಭವಿಷ್ಯ: ಇಂದು ಈ ರಾಶಿಯವರಿಗಿರುತ್ತೆ ಲಕ್ಷ್ಮಿ ಕೃಪೆ

ಮೇಷ
ಸಣ್ಣಪುಟ್ಟ ಜಗಳಗಳಿಂದ ದೂರವಿರಿ. ಹೆಚ್ಚುವರಿ ಕೆಲಸದ ಹೊಣೆಗಾರಿಕೆ. ಒತ್ತಡ ಹೆಚ್ಚಿದರೂ, ಧನಲಾಭವೂ ಇದೆ. ಆಪ್ತ ಬಂಧುಗಳ ಸಹಕಾರ ಸಿಗಲಿದೆ.

ವೃಷಭ
ಮುಖ್ಯ ವಿಚಾರದಲ್ಲಿ ಇತರರ ಅಭಿಪ್ರಾಯಕ್ಕೂ ಬೆಲೆ ಕೊಡಿ. ಇದರಿಂದ ಸಂಭವನೀಯ ಭಿನ್ನಮತ ತಪ್ಪಿಸಬಹುದು. ನಿಮ್ಮ ಹಠಮಾರಿ ಧೋರಣೆ ಬಿಟ್ಟುಬಿಡಿ.

ಮಿಥುನ
ನಿಮಗಿಂದು ದೇಹಾಲಸ್ಯ ಕಾಡಬಹುದು. ಅದರಿಂದ ಕಾರ್ಯಗಳು ನಿಧಾನ. ಕೌಟುಂಬಿಕ ಭಿನ್ನಮತ ನಿವಾರಿಸಿ. ಇತರರ ಮಾತು ಆಲಿಸಿ.

ಕಟಕ
ಹಣದ ಹರಿವು ಹೆಚ್ಚು. ಹಾಗೆಂದು ಸಿಕ್ಕಾಬಟ್ಟೆ ಖರ್ಚಿಗಿಳಿಯದಿರಿ. ಇತರರು ಹರಡುವ ವದಂತಿಗೆ ಕಿವಿಗೊಡುವುದು ತರವಲ್ಲ.

ಸಿಂಹ
ಮನೆಯಲ್ಲಿ ಹೆಚ್ಚು ಕಾರ್ಯದ ಹೊರೆ ಬಿದ್ದೀತು. ಇಷ್ಟವಿಲ್ಲದೆ ಇದ್ದರೂ ಅದನ್ನು ನಿಭಾಯಿಸಲೇ ಬೇಕು. ಬಂಧುಗಳ ಭೇಟಿ, ಮಾತುಕತೆ.

ಕನ್ಯಾ
ಮನೆಯವರ ಹಿತಾಸಕ್ತಿ ಗಮನಿಸಿ. ಅವರ ಬೇಕುಬೇಡಗಳಿಗೆ  ಕಿವಿಗೊಡಿ. ಅಜೀರ್ಣ ದಂತಹ ಸಮಸ್ಯೆ ಕಾಡೀತು. ಆಹಾರ ಸೇವನೆ ಚೆನ್ನಾಗಿರಲಿ.

ತುಲಾ
ನಿಮ್ಮ ಮಾತುಗಳು ಸಂಯಮದಿಂದಿರಲಿ. ಅಪಾರ್ಥ ಸೃಷ್ಟಿಸದಂತೆ ನೋಡಿಕೊಳ್ಳಿ. ಇಲ್ಲವಾದರೆ ಮಾತಿನಿಂದ  ವಾಗ್ವಾದ ಉಂಟಾದೀತು.

ವೃಶ್ಚಿಕ
ಕೌಟುಂಬಿಕ ಒತ್ತಡದಿಂದ ಭಿನ್ನಮತ ಏರ್ಪಟ್ಟೀತು. ಸಂಧಾನದಿಂದ  ಅದನ್ನು ಪರಿಹರಿಸಿ. ವ್ಯವಹಾರದಲ್ಲಿ ಅಡ್ಡಿ ಒದಗಿಬರಬಹುದು. ತಾಳ್ಮೆಯಿರಲಿ.

ಧನು
ಆರೋಗ್ಯದ ಬಗ್ಗೆ ಹೆಚ್ಚು ಗಮನ ಹರಿಸಿ. ಕೌಟುಂಬಿಕ ಭಿನ್ನಮತ ಸೌಹಾರ್ದ ಪರಿಹಾರ ಪ್ರಮುಖ ಕಾರ್ಯದಲ್ಲಿ ಅವಸರ ಬೇಡ, ಸಂಯಮ ವಹಿಸಿರಿ.ಘಿ

ಮಕರ
ಸಮಯದೊಳಗೆ ನಿಮ್ಮ ಕೆಲಸ ಮುಗಿಸಲು ಕಷ್ಟ ಪಡುವಿರಿ. ಮಾನಸಿಕ ಒತ್ತಡ ಹೆಚ್ಚು. ಆರ್ಥಿಕ ಪರಿಸ್ಥಿತಿ ಸುಧಾರಿಸುವುದು. ಕೌಟುಂಬಿಕ ಸಹಕಾರ.

ಕುಂಭ
ವೃತ್ತಿಯಲ್ಲಿನ ಸಮಸ್ಯೆ ಪರಿಹರಿಸಲು ಮುಂದಾಗಿ. ಅದನ್ನು ಹಾಗೇ ಬಿಟ್ಟುಬಿಡಬೇಡಿ. ಕೆಲವು ಕಠಿಣ ಕ್ರಮ ತೆಗೆದುಕೊಳ್ಳಲು ಹಿಂಜರಿಯದಿರಿ.

ಮೀನ
ಕೆಲಸದ ಕ್ಷೇತ್ರದಲ್ಲಿ ಬಿಗುವಿನ ಪರಿಸ್ಥಿತಿ ನಿರ್ಮಾಣ. ಸಂಘರ್ಷ ನಡೆದೀತು. ಮನೆಯಲ್ಲಿನ ಶಾಂತ ಪರಿಸರದಿಂದ ಮನಸ್ಸು ನಿರಾಳವಾಗುವುದು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!