ಮೇಷ
ಸಣ್ಣ ವಿಷಯಕ್ಕೂ ಅತಿಯಾಗಿ ಉದ್ವಿಗ್ನ ಗೊಳ್ಳಬೇಡಿ. ತಾರ್ಕಿಕವಾಗಿ ಯೋಚಿಸಿ ಬಳಿಕ ಕಾರ್ಯವೆಸಗಿ. ಅವಸರದ ತೀರ್ಮಾನ ಒಳಿತು ತಾರದು.
ವೃಷಭ
ವೃತ್ತಿಯಲ್ಲಿ ಹೆಚ್ಚು ಹೊಣೆಗಾರಿಕೆ. ಆಪ್ತರೊಡನೆ ನಿಮ್ಮ ಭಾವನೆ ಹಂಚಿಕೊಳ್ಳಲು ಹಿಂಜರಿಯಬೇಡಿ. ಪೂರಕ ಸ್ಪಂದನೆ ದೊರಕುವುದು.
ಮಿಥುನ
ಫಲಪ್ರದ ದಿನ. ನಿಮ್ಮ ಕೋರಿಕೆ ಈಡೇರು ವುದು. ಉದ್ದೇಶ ಪ್ರಾಪ್ತಿ. ಕೌಟುಂಬಿಕ ಸಮಸ್ಯೆ ಪರಿಹಾರ. ಭಿನ್ನಾಭಿಪ್ರಾಯ ನಿವಾರಣೆ.
ಕಟಕ
ನಿಮ್ಮ ಕಾರ್ಯದಲ್ಲಿ ಉದಾಸೀನತೆ ತೋರುವಿರಿ. ಕಾಟಾಚಾರದ ಕೆಲಸ ಫಲ ನೀಡದು. ಇತರರಿಂದ ಟೀಕೆ ಕೇಳುವಿರಿ.
ಸಿಂಹ
ವೃತ್ತಿಯಲ್ಲಿ ಅಧಿಕ ಒತ್ತಡ. ಇತರರ ಜತೆ ನೀವು ಹೊಂದಾಣಿಕೆ ಮಾಡಿಕೊಳ್ಳಬೇಕು. ಅವರಿಂದ ಸೂಕ್ತ ಸ್ಪಂದನೆ ದೊರಕಲಾರದು. ಸಹನೆ ಕಳಕೊಳ್ಳಬೇಡಿ.
ಕನ್ಯಾ
ಹತಾಶ ಭಾವ. ಏನೋ ಕಳಕೊಂಡಂತೆ ಅನಿಸುವುದು. ಮೊದಲು ಮನಸ್ಸಿನಿಂದ ನೆಗೆಟಿವ್ ಚಿಂತನೆಗಳನ್ನು ದೂರ ಮಾಡಿರಿ. ಆಶಾವಾದ ಬೆಳೆಸಿಕೊಳ್ಳಿ.
ತುಲಾ
ಕಾರ್ಯಸಿದ್ಧಿ. ಸಿಕ್ಕ ಅವಕಾಶವನ್ನು ಸರಿಯಾಗಿ ಬಳಸಿಕೊಳ್ಳಿ. ಮನೆಯಲ್ಲಿ ಅನವಶ್ಯ ವಾಗ್ವಾದಕ್ಕೆ ಇಳಿಯದಿರಿ. ಅದರಿಂದ ಶಾಂತಿ ಕದಡಬಹುದು.
ವೃಶ್ಚಿಕ
ಆಪ್ತರ ಮನ ಗೆಲ್ಲಲು ಸಫಲರಾಗುವಿರಿ. ಆತ್ಮವಿಶ್ವಾಸ ಹೆಚ್ಚಳ. ಆರೋಗ್ಯ ಸಮಸ್ಯೆ ಹೊಂದಿದ್ದರೆ ಅದರಲ್ಲಿ ಸುಧಾರಣೆ ಕಾಣುವಿರಿ. ಕೌಟುಂಬಿಕ ನೆಮ್ಮದಿ.
ಧನು
ಕೆಲಸದಲ್ಲಿ ಅವಸರ ತೋರದಿರಿ. ಅದರಿಂದ ಪ್ರತಿಕೂಲವೇ ಆದೀತು. ಸಮಾಧಾನದಿಂದ ಕೆಲಸ ನಿರ್ವಹಿಸಿದರೆ ಉತ್ತಮ ಫಲ ಪಡೆಯುವಿರಿ. ಆರೋಗ್ಯ ಸುಸ್ಥಿರ.
ಮಕರ
ಕಾರ್ಯದೊತ್ತಡ. ಸಮಯ ಮಿತಿಯಲ್ಲಿ ಕೆಲಸ ಪೂರೈಸುವ ಹೊಣೆಗಾರಿಕೆ. ಅದರಲ್ಲಿ ಪೂರ್ಣ ಸಫಲರಾಗುವುದಿಲ್ಲ. ಆಪ್ತರಿಂದ ಸಹಾಯ.
ಕುಂಭ
ಸಂಬಂಧದಲ್ಲಿ ಪ್ರಾಮಾಣಿಕತೆ ಇರಲಿ. ಅದರಿಂದ ಭಿನ್ನಮತ ನಿವಾರಣೆ. ಆರ್ಥಿಕ ಲಾಭ. ಆಹಾರ ಸೇವನೆ ಹಿತಮಿತ ಇದ್ದರೆ ಅಜೀರ್ಣತೆ ಕಾಡದು.
ಮೀನ
ಇತರರ ಭಾವನೆಗೆ ಆಪ್ತವಾಗಿ ಸ್ಪಂದಿಸುವ ನಿಮ್ಮ ಗುಣ ಎಲ್ಲರ ಮೆಚ್ಚುಗೆ ಗಳಿಸುವುದು. ನೀವು ನೀಡಿದ ನೆರವಿಗೆ ಉತ್ತಮ ಪ್ರತಿಫಲ ಪಡೆಯುವಿರಿ.