ಜೀವಾವಧಿ ಶಿಕ್ಷೆಗೆ ಒಳಗಾಗಿದ್ದ ಕೈದಿ ಕೇಂದ್ರ ಕಾರಾಗೃಹದಿಂದ ಪರಾರಿ

ಹೊಸದಿಗಂತ ವರದಿ ವಿಜಯಪುರ:

ಜೀವಾವಧಿ ಶಿಕ್ಷೆಗೆ ಒಳಗಾಗಿದ್ದ ಕೈದಿ ಇಲ್ಲಿನ ಕೇಂದ್ರ ಕಾರಾಗೃಹದಿಂದ ಪರಾರಿಯಾಗಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ರವಿ ಭೀಮಪ್ಪ ದಾಸರ ಪರಾರಿಯಾಗಿರುವ ಕೈದಿ. ಇಲ್ಲಿನ ಕೇಂದ್ರ ಕಾರಾಗೃಹದ ಹೊರ ಭಾಗದಲ್ಲಿ ಇರುವ ತೋಟದಲ್ಲಿ ಕೆಲಸ ಮಾಡಿ ಸ್ನಾನಕ್ಕೆ ಹೋಗಿದ್ದ ರವಿ ದಾಸರ ಪರಾರಿಯಾಗಿದ್ದಾನೆ.

ಪರಾರಿಯಾದ ಕೈದಿಯ ಪತ್ತೆಗೆ ಜೈಲು ಸಿಬ್ಬಂದಿ ಕಾರಾಗೃಹದ ಸುತ್ತಮುತ್ತಲಿನಲ್ಲಿ ವಿಚಾರಣೆ ನಡೆಸಿದ್ದಾರೆ, ಆದರೆ ಮಾಹಿತಿ ಲಭ್ಯವಾಗಿಲ್ಲ. ಕೈದಿ ಪತ್ತೆ ಮಾಡುವಂತೆ ಜೈಲಿನ ಹೆಡ್ ವಾರ್ಡನ್ ಎಸ್. ಸಿ. ಪುಕಾಳೆ ದೂರು ನೀಡಿದ್ದಾರೆ.

ಈ ಸಂಬಂಧ ಆದರ್ಶನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!