ವಿವಾದಗಳಿಂದ ಸುತ್ತುವರಿದ ‘ಪೃಥ್ವಿರಾಜ್’: ಹೆಸರು ಬದಲಾವಣೆಗೆ ಕರ್ಣಿ ಸೇನೆ ಆಗ್ರಹ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌

ಬಾಲಿವುಡ್ ಸ್ಟಾರ್ ಅಕ್ಷಯ್ ಕುಮಾರ್ ಮುಂಬರುವ ಚಿತ್ರ ‘ಪೃಥ್ವಿರಾಜ್’ ಮುಂದಿನ ತಿಂಗಳು ಜೂನ್ 3, 2022 ರಂದು ಬಿಡುಗಡೆಯಾಗಲಿಡಿದ್ದು,ಇದಕ್ಕೂ ಮುನ್ನ ಚಿತ್ರ ವಿವಾದಗಳಿಂದ ಸುತ್ತುವರಿದಿದೆ.
ಈ ಹಿಂದೆ ಗುರ್ಜರ್ ಮಹಾಸಭಾವೊಂದು ಪೃಥ್ವಿರಾಜ್ ಚೌಹಾಣ್ ರಜಪೂತರಲ್ಲ, ಗುರ್ಜರ್ ರಾಜ ಎಂದು ಪ್ರತಿಪಾದಿಸಿತ್ತು. ಇದೀಗ ಈ ಚಿತ್ರದ ಹೆಸರು ಬದಲಾಯಿಸುವಂತೆ ರಜಪೂತರ ಪ್ರತಿನಿಧಿ ಎಂದು ಕರೆಸಿಕೊಳ್ಳುವ ಕರ್ಣಿ ಸೇನೆ ಆಗ್ರಹಿಸಿದೆ.
ಚಿತ್ರದ ಹೆಸರನ್ನು ‘ಪೃಥ್ವಿರಾಜ್’ ನಿಂದ ‘ಸಾಮ್ರಾಟ್ ಪೃಥ್ವಿರಾಜ್ ಚೌಹಾಣ್’ ಎಂದು ಬದಲಾಯಿಸುವಂತೆ ಕರ್ಣಿ ಸೇನೆ ಒತ್ತಾಯಿಸಿದೆ.

‘ನಾವು ಈಗಾಗಲೇ ಯಶ್ ರಾಜ್ ಫಿಲ್ಮ್ಸ್ ಸಿಇಒ ಅಕ್ಷಯ್ ವಿಧಾನಿ ಅವರನ್ನು ಭೇಟಿ ಮಾಡಿದ್ದೇವೆ ಮತ್ತು ಅವರು ಚಿತ್ರದ ಹೆಸರನ್ನು ಬದಲಾಯಿಸುವ ಭರವಸೆ ನೀಡಿದ್ದಾರೆ. ಅವರು ನಮ್ಮ ಬೇಡಿಕೆಯನ್ನು ಒಪ್ಪಿಕೊಳ್ಳಲು ಸಿದ್ಧರಿದ್ದಾರೆ. ಆದರೆ, ಈ ಬಗ್ಗೆ ಯಶ್ ರಾಜ್ ಯಾವುದೇ ಉತ್ತರ ನೀಡಿಲ್ಲ. ಚಿತ್ರರಂಗದ ಕೆಲವು ಮೂಲಗಳು ಚಿತ್ರದ ಹೆಸರನ್ನು ಬದಲಾಯಿಸುವ ಬಗ್ಗೆ ಇನ್ನೂ ಯಾವುದೇ ಮಾಹಿತಿಯಿಲ್ಲ ಎಂದು ಹೇಳುತ್ತವ’ ಎಂದು ಕರ್ಣಿ ಸೇನೆಯ ವಕ್ತಾರ ಸುರ್ಜಿತ್ ಸಿಂಗ್ ರಾಥೋಡ್ ಹೇಳಿದ್ದಾರೆ.

ಸಿನಿಮಾದ ಹೆಸರನ್ನು ಬದಲಿಸದಿದ್ದರೆ, ಚಿತ್ರ ಬಿಡುಗಡೆಯನ್ನು ನಿಲ್ಲಿಸದಿದ್ದರೆ ‘ಪೃಥ್ವಿರಾಜ್’ ಚಿತ್ರ ರಾಜಸ್ಥಾನದಲ್ಲಿ ಬಿಡುಗಡೆಯಾಗುವುದಿಲ್ಲ ಎಂದು ಅವರು ಹೇಳಿದ್ದಾರೆ.
‘ಈ ಬಗ್ಗೆ ನಾವು ಈಗಾಗಲೇ ರಾಜಸ್ಥಾನದ ಥಿಯೇಟರ್ ಮಾಲೀಕರಿಗೆ ಎಚ್ಚರಿಕೆ ನೀಡಿದ್ದೇವೆ. ಚಿತ್ರದ ಹೆಸರನ್ನು ಬದಲಾಯಿಸದಿದ್ದರೆ ರಾಜಸ್ಥಾನದಲ್ಲಿ ಚಿತ್ರ ಪ್ರದರ್ಶನಕ್ಕೆ ಅವಕಾಶ ನೀಡುವುದಿಲ್ಲ. ಆದರೆ, ರಾಜಸ್ಥಾನದ ಥಿಯೇಟರ್ ಮಾಲೀಕರು ಮತ್ತು ವಿತರಕರಿಗೂ ಚಿತ್ರದ ಹೆಸರು ಬದಲಾವಣೆಯ ಬಗ್ಗೆ ತಿಳಿದಿಲ್ಲ ಎಂದು ರಾಥೋಡ್ ಹೇಳಿದ್ದಾರೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!