ಹೊಸದಿಗಂತ ವರದಿ ಮಡಿಕೇರಿ:
ಖಾಸಗಿ ಬಸ್ ನಿರ್ವಾಹಕನೊಬ್ಬ ವಿಷ ಕುಡಿದ ಬಳಿಕ ಫ್ಯಾನ್’ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶಣಾಗಿರುವ ಘಟನೆ ನಗರದ ಖಾಸಗಿ ಲಾಡ್ಜ್’ನಲ್ಲಿ ಮಂಗಳವಾರ ನಡೆದಿದೆ. ಮೂಲತಃ ವೀರಾಜಪೇಟೆ ಸಮೀಪದ ಆರ್ಜಿ ಗ್ರಾಮದ ನಿವಾಸಿ ಮೊಣ್ಣಪ್ಪ (28) ಆತ್ಮಹತ್ಯೆ ಮಾಡಿಕೊಂಡವರಾಗಿದ್ದಾರೆ.
ಮಡಿಕೇರಿಯಲ್ಲಿ ಖಾಸಗಿ ಬಸ್’ನಲ್ಲಿ ನಿರ್ವಾಹಕನಾಗಿ ಕೆಲಸ ಮಾಡುತ್ತಿದ್ದ ಮೊಣ್ಣಪ್ಪ ನಗರದ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದ ಎದುರು ಇರುವ ಲಾಡ್ಜ್’ನಲ್ಲಿ ಕೊಠಡಿ ಪಡೆದಿದ್ದನೆನ್ನಲಾಗಿದ್ದು, ಮೊದಲಿಗೆ ವಿಷ ಸೇವಿಸಿದ ಆತ ಬಳಿಕ ಲಾಡ್ಜ್’ನ ಫ್ಯಾನ್’ಗೆ ನೇಣು ಬಿಗಿದುಕೊಂಡು ಸಾವಿಗೀಡಾಗಿರುವುದಾಗಿ ಹೇಳಲಾಗಿದೆ.
ಮಡಿಕೇರಿ ನಗರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದು, ಯುವಕನ ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ.