ಹೊಸದಿಗಂತ ಡಿಜಿಟಲ್ ಡೆಸ್ಕ್ :
ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಗಯಾದಲ್ಲಿ ಪಕ್ಷದ ಬಿಹಾರ ಆವೃತ್ತಿಯ ಭಾರತ್ ಜೋಡೋ ಯಾತ್ರೆಯ ಕೊನೆಯ ದಿನದ ರ್ಯಾಲಿಯಲ್ಲಿ ಭಾಗವಹಿಸಿ, ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡುವ ಸಾಧ್ಯತೆ ಇದೆ.
ಜನವರಿ 5 ರಂದು ಬಂಕಾ ಜಿಲ್ಲೆಯ ಮಂದರ್ ಪರ್ವತದಿಂದ ಈ ಯಾತ್ರೆಯು ಪ್ರಾರಂಭವಾಯಿತು. ಯಾತ್ರೆಯು ಕೊನೆಯ ಹಂತವು ಹೋಳಿ ನಂತರ ಆರಂಭವಾಗಲಿದೆ.
ಪಕ್ಷದ ಪ್ರಧಾನ ಕಛೇರಿ ಸದಕತ್ ಆಶ್ರಮದಲ್ಲಿ ನಡೆದ ಸಭೆಯಲ್ಲಿ, ಕಾಂಗ್ರೆಸ್ ರಾಜ್ಯಾಧ್ಯಕ್ಷ ಅಖಿಲೇಶ್ ಪ್ರಸಾದ್ ಸಿಂಗ್, “ಪ್ರಿಯಾಂಕಾ ಗಾಂಧಿ ವಾದ್ರಾ ಗಯಾದಲ್ಲಿ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ, ಅವರ ಉನ್ನತ ನಾಯಕತ್ವವು ಸ್ಪಷ್ಟ ಸೂಚನೆಯನ್ನು ನೀಡಿದೆ” ಎಂದು ಹೇಳಿದ್ದಾರೆ.
ಈ ಹಿಂದೆ ಪಕ್ಷದ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಯಾತ್ರೆಯ ಕೊನೆಯ ದಿನದಂದು ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಲು ರಾಜ್ಯಕ್ಕೆ ಬರಬಹುದು ಎಂಬ ಮಾಹಿತಿ ಇತ್ತು. ಯಾತ್ರೆಯು ಫೆಬ್ರವರಿ ಅಂತ್ಯದಲ್ಲಿ ಮುಕ್ತಾಯವಾಗಬೇಕಿತ್ತು ಆದರೆ ಪಕ್ಷದ ರಾಷ್ಟ್ರೀಯ ಸಮಾವೇಶವು ರಾಯ್ಪುರದಲ್ಲಿ ಫೆಬ್ರವರಿ 24 ರಿಂದ 26 ರವರೆಗೆ ನಡೆಯಲಿದ್ದರಿಂದ ಅದನ್ನು ಮರು ನಿಗದಿಪಡಿಸಲಾಯಿತು.
ಈಗ ಹೋಳಿ ನಂತರ ಪಾಟ್ನಾದ ಫುಲ್ವಾರಿಶರೀಫ್ನಿಂದ ಕೊನೆಯ ಹಂತವು ಪ್ರಾರಂಭವಾಗಿ ಗಯಾ ತಲುಪಲಿದೆ. ಯಾತ್ರೆಯ ನಾಲ್ಕನೇ ಹಂತದ ನಿಖರವಾದ ದಿನಾಂಕಗಳನ್ನು ಇನ್ನೂ ಘೋಷಿಸಲಾಗಿಲ್ಲ.