ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೆಂಗಳೂರಿನಲ್ಲಿ ಬಿಬಿಎಂಪಿ ಬೀದಿಬದಿ ವ್ಯಾಪಾರಿಗಳ ತೆರವು ಮಾಡಿದ್ದು, ವ್ಯಾಪಾರಿಗಳು ಪ್ರತಿಭಟನೆ ಮೂಲಕ ಆಕ್ರೋಶ ಹೊರಹಾಕಿದ್ದಾರೆ.
ಸಂಕ್ರಾಂತಿ ಹಬ್ಬಕ್ಕೆ ಸಾಕಷ್ಟು ವ್ಯಾಪಾರ ಆಗುತ್ತದೆ ಮೂರು ದಿನ ಅವಕಾಶ ಮಾಡಿಕೊಡಿ ಎಂದು ಮನವಿ ಮಾಡಿದ್ದಾರೆ.
ಈ ಬಗ್ಗೆ ಡಿಸಿಎಂ ಡಿಕೆ ಶಿವಕುಮಾರ್ ಮಾತನಾಡಿದ್ದು, ಲೈಸೆನ್ಸ್ ಪಡೆದು ಬೀದಿ ಬದಿಯಲ್ಲಿ ವ್ಯಾಪಾರ ಮಾಡಿ. ಜನರಿಗೆ ಇದರಿಂದಾಗಿ ತೊಂದರೆಯಾಗಬಾರದು. ತಳ್ಳೋಗಾಡಿ ಪಡೆದು ವ್ಯಾಪಾರ ಮಾಡಬಹುದಲ್ವಾ? ನನ್ನನ್ನು ಸಾಕಷ್ಟು ಬಾರಿ ಭೇಟಿ ಮಾಡಿ ಸಮಸ್ಯೆ ಹೇಳಿದ್ದಾರೆ.
ಇದರ ಬಗ್ಗೆ ಗಮನ ಇದೆ, ಆದರೆ ಫುಟ್ಪಾತ್ ಜನರ ಓಡಾಟಕ್ಕೆ ಇದೆ, ಇದು ಕೋರ್ಟ್ ಆರ್ಡರ್ ಇದರಿಂದ ಟ್ರಾಫಿಕ್ ಸಮಸ್ಯೆ ಕೂಡ ಆಗುತ್ತದೆ. ನಾಗರಿಕರಿಂದ ಕಂಪ್ಲೆಂಟ್ಸ್ ಬರ್ತಿದೆ ಎಂದು ಹೇಳಿದ್ದಾರೆ.