ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯ ಸರ್ಕಾರದ ಗ್ಯಾರೆಂಟಿಗಳ ವಿರುದ್ಧ ಸದನದ ಒಳಗೂ ಹೊರಗೂ ಬಿಜೆಪಿ ಪ್ರತಿಭಟನೆಗೆ ಮುಂದಾಗಿದೆ. ಬೆಂಗಳೂರಿನ ಫ್ರೀಡಂ ಪಾರ್ಕ್ ಎದುರು ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ನಡೆಯುತ್ತಿದೆ.
ಈ ಬಗ್ಗೆ ಡಿಸಿಎಂ ಡಿ.ಕೆ. ಶಿವಕುಮಾರ್ ಮಾತನಾಡಿದ್ದು, ಈ ಪ್ರತಿಭಟನೆಯಿಂದ ನಮಗೆ ಏನೂ ನಷ್ಟ ಇಲ್ಲ, ಬದಲಿಗೆ ಲಾಭವೇ ಆಗ್ತಿದೆ. ಬಿಎಸ್ವೈ ಅವರು ಹಾಗೂ ಬಿಜೆಪಿ ನಾಯಕರು ನಮ್ಮ ಗ್ಯಾರೆಂಟಿಗಳ ಬಿಟ್ಟಿ ಪ್ರಚಾರ ಮಾಡ್ತಿದ್ದಾರೆ, ಇವರಿಗೆ ಒಳ್ಳೆಯದಾಗಲಿದೆ. ಪ್ರತಿಭಟನೆ ಶುಭವಾಗಲಿ ಎಂದು ಠಾಂಗ್ ನೀಡಿದ್ದಾರೆ.
ನಮ್ಮಿಂದ ಜನರಿಗೆ ಒಳ್ಳೆಯದೇ ಆಗಿದೆ, ಬಸ್ಗೆ ಹಣ ಹೊಂದಿಸಲು ಕಷ್ಟಪಡುತ್ತಿದ್ದ ಮಹಿಳೆಯರು ಧೈರ್ಯವಾಗಿ ಪ್ರಯಾಣ ಮಾಡುತ್ತಾರೆ. ಅವರು ಸ್ವಾವಲಂಬಿಗಳಾಗಿದ್ದಾರೆ. ಕರೆಂಟ್ ಬಿಲ್ ಕೂಡ ಕಟ್ಟುವಂತಿಲ್ಲ, ಇನ್ನುಳಿದ ಗ್ಯಾರೆಂಟಿ ಶೀಘ್ರವೇ ಜಾರಿಯಾಗಲಿದೆ. ನುಡಿದಂತೆ ನಡೆಯುವ ಸರ್ಕಾರ ನಮ್ಮದು ಎಂದಿದ್ದಾರೆ.