ಹೊಸದಿಗಂತ ಡಿಜಿಟಲ್ ಡೆಸ್ಕ್:
ಇಂದು ಪಂಜಾಬ್ನಲ್ಲಿ ವಿಧಾನಸಭೆ ಚುನಾವಣೆ ನಡೆಯುತ್ತಿದ್ದು, ಮತದಾನ ಬೆಳಗ್ಗೆ 7 ರಿಂದಲೇ ಆರಂಭವಾಗಿದೆ. ಮತ ಚಲಾವಣೆ ಪ್ರಾರಂಭಕ್ಕೂ ಮುನ್ನ ಮುಖ್ಯಮಂತ್ರಿ ಚರಣಜಿತ್ ಸಿಂಗ್ ಚನ್ನಿ ಖರಾನ್ನ ಕಟಲ್ಗಢ್ ಸಾಹೀಬ್ ಗುರುದ್ವಾರಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದ್ದಾರೆ.
ಚಮ್ಕೌರ್ ಸಾಹೀಬ್ ಮತ್ತು ಭಧೌರ್ ವಿಧಾನಸಭಾ ಕ್ಷೇತ್ರಗಳಿಂದ ಸ್ಪರ್ಧಿಸುತ್ತಿರುವ ಚನ್ನಿ ಮುಂದಿನ ಅವಧಿಗೂ ಮುಖ್ಯಮಂತ್ರಿ ಅಭ್ಯರ್ಥಿಯಾಗಿದ್ದಾರೆ. ಪಂಜಾಬ್ ಅಭಿವೃದ್ಧಿಗೆ ಕಾಂಗ್ರೆಸ್ ಸಾಕಷ್ಟು ಶ್ರಮವಹಿಸಿದೆ. ಮುಂದೆಯೂ ಇದನ್ನು ಮುಂದುವರಿಸುತ್ತೇವೆ. ಉಳಿದದ್ದು ಜನರ ಕೈಯಲ್ಲಿದೆ. ಎಲ್ಲಾ ದೇವರ ಇಚ್ಛೆ ಎಂದು ಚನ್ನಿ ಹೇಳಿದ್ದಾರೆ.