ಭಂಡತನ ಬಿಟ್ಟು ರಾಜೀನಾಮೆ ಕೊಡಿ.. ಸಿದ್ದರಾಮಯ್ಯಗೆ ವಿಜಯೇಂದ್ರ ಟಾಂಗ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಸಿದ್ದರಾಮಯ್ಯನವರು ತಮ್ಮ ಬೂಟಾಟಿಕೆ ಬಿಟ್ಟು, ಗೌರವಯುತವಾಗಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ಗೌರವ ಉಳಿಸಿಕೊಳ್ಳಲಿ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ವಿಜಯೇಂದ್ರ ಆಗ್ರಹಿಸಿದ್ದಾರೆ.

ಮುಡಾ ಕಚೇರಿ ಮೇಲೆ ನಡೆದ ಇಡಿ ದಾಳಿ ಕುರಿತು ಭಾರತೀಯ ಜನತಾ ಪಕ್ಷದ ಕಚೇರಿಯಲ್ಲಿ ಮಾತನಾಡಿದ ಅವರು, ಮೂರ್ನಾಲ್ಕು ತಿಂಗಳಿಂದ ಮುಡಾ ಹಗರಣದ ಕುರಿತು ಚರ್ಚೆ ನಡೆಸಲಾಗುತ್ತಿದೆ. ಪ್ರಾಮಾಣಿಕವಾಗಿ ಆಡಳಿತ ಮಾಡುತ್ತೇವೆ, ಯಾವುದೇ ಕಳಂಕ ಇಲ್ಲ ಎಂದು ಸಿಎಂ ಹೇಳಿದ್ದರು. ಆದರೆ ಮುಡಾ ಕೇಸ್ ಅಕ್ರಮ ಆಗಿ ಎಷ್ಟು ಭಂಡತನ ತೋರಿದ್ದಾರೆ.

ಸಿಎಂ ತಾನು ನಿರಪರಾಧಿ ಅಂತ ಬಿಂಬಿಸುವ ಕೆಲಸ ಮಾಡಿದ್ರು ಈಗ ರಾಜಕೀಯ ದಾಳಿ ಅಂತ ಇಡಿ ಮೇಲೆ ಟೀಕೆ ಮಾಡುತ್ತಿದ್ದಾರೆ. ಕೆಳಗೆ ಬಿದ್ದರೂ ಮೀಸೆ ಮಣ್ಣು ಆಗಿಲ್ಲ ಅನ್ನೋ ರೀತಿ ಇದ್ದಾರೆ. ಸಿಎಂಗೆ ಕಿಂಚಿತ್ತು ಕಾನೂನು ಮೇಲೆ ಗೌರವ ಇದ್ದರೆ ರಾಜೀನಾಮೆ ಕೊಡಬೇಕಿತ್ತು. ಈಗಲೂ ಕಾಲ ಮಿಂಚಿಲ್ಲ ಸಿದ್ದರಾಮಯ್ಯ ಅವರು ಗೌರವಯುತ ರಾಜೀನಾಮೆ ನೀಡಲಿ ಎಂದು ಒತ್ತಾಯಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!