ದೇಶಭಕ್ತಿ ಕವಿತೆಗಳನ್ನು ಹೆಣೆಯುತ್ತಲೇ ಸ್ವತಂತ್ರ್ಯ ದೇಶ ಕಟ್ಟುವ ಕನಸು ಕಾಣುತ್ತಿದ್ದರು ಸುಗತನ್

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಆರ್.ಸುಗುತನ್ ಅವರು 23 ಡಿಸೆಂಬರ್ 1901 ರಂದು ಕೇರಳದ ಅಲಪ್ಪುಳ ಜಿಲ್ಲೆಯ ಅಲ್ಲಿಸ್ಸೆರಿಯಲ್ಲಿ ಜನಿಸಿದರು. ವೃತ್ತಿಯಲ್ಲಿ ಶಿಕ್ಷಕರಾಗಿದ್ದ ಸುಗತನ್ ಅವರು ತಮ್ಮ ಭಾಷಣ ಮತ್ತು ಲೇಖನಗಳ ಮೂಲಕ ಜಾತಿ ವ್ಯವಸ್ಥೆ ಮತ್ತು ಅಸ್ಪೃಶ್ಯತೆ ವಿರುದ್ಧ ಪ್ರತಿಭಟಿಸುತ್ತಿದ್ದರು.
19387 ರ ಸೆಪ್ಟೆಂಬರ್ 7 ರಂದು ಅವರನ್ನು ಆಲಪ್ಪುಳದಲ್ಲಿ ಬಂಧಿಸಲಾಯಿತು ಮತ್ತು ವಿದೇಶಿ ವಸ್ತುಗಳನ್ನು ಮಾರಾಟ ಮಾಡುವ ಅಂಗಡಿಗಳನ್ನು ಪಿಕೆಟಿಂಗ್ ಮಾಡಿದ್ದಕ್ಕಾಗಿ ರೂ.1000 ದಂಡವನ್ನು ವಿಧಿಸಲಾಯಿತು. ಅವರಿಗೆ ಒಂದೂವರೆ ವರ್ಷಗಳ ಕಠಿಣ ಜೈಲು ಶಿಕ್ಷೆ ವಿಧಿಸಲಾಯಿತು. 1 ಜೂನ್ 1941 ರಂದು, ಬ್ರಿಟಿಷರನ್ನು ಟೀಕಿಸುವ ಕವಿತೆಯನ್ನು ಬರೆದು ಪ್ರಕಟಿಸಿದ್ದಕ್ಕಾಗಿ ಅವರು 3 ವರ್ಷಗಳ ಕಾಲ ಸೆರೆವಾಸ ಅನುಭವಿಸಿದರು. ಸಿಪಿಯ ಅಮೇರಿಕನ್ ಮಾದರಿ ಸಂವಿಧಾನದ ವಿರುದ್ಧದ ಆಂದೋಲನದಲ್ಲಿ ಭಾಗವಹಿಸಿದ ಕಾರಣ 1946 ರಲ್ಲಿ ಅವರನ್ನು ಮತ್ತೆ ಬಂಧಿಸಲಾಯಿತು. ಅವರು 14 ಫೆಬ್ರವರಿ 1970 ರಂದು ನಿಧನರಾದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!