CINEMA| ಸೂಪರ್‌ ಸ್ಟಾರ್‌ ಕೃಷ್ಣನನ್ನು ನೆನೆದು ಕಣ್ಣೀರಿಟ್ಟ ರಾಧ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಇತ್ತೀಚೆಗಷ್ಟೇ ಸೂಪರ್‌ಸ್ಟಾರ್ ಕೃಷ್ಣ ಅವರು ನಿಧನರಾದ ವಿಚಾರ ಗೊತ್ತೇ ಇದೆ. ಕೃಷ್ಣ ಇನ್ನೂ ನಮ್ಮೊಂದಿಗಿಲ್ಲ ಎನ್ನುವುದನ್ನು ಕೆಲವರಿಗೆ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಅವರಲ್ಲಿ ಆಗಿನ ಕಾಲದ ನಟಿ ರಾಧಾ ಕೂಡಾ ಒಬ್ಬರು. ಕೃಷ್ಣ ಮತ್ತು ರಾಧಾ ಅವರು ಸಿಂಹಾಸನಂ, ಅಗ್ನಿಪರ್ವತಂ, ಪಲ್ನಾಟಿ ಸಿಂಹಂ ಮತ್ತು ಮುಗ್ಗುರು ಕೊಡುಕುಲು ಸೇರಿದಂತೆ 10 ಕ್ಕೂ ಹೆಚ್ಚು ಚಿತ್ರಗಳಲ್ಲಿ ಒಟ್ಟಿಗೆ ನಟಿಸಿದ್ದಾರೆ. ಅದರಲ್ಲೂ ಇವರಿಬ್ಬರ ಕಾಂಬಿನೇಷನ್‌ನ ಡ್ಯಾನ್ಸ್‌ ಸೂಪರ್‌ ಹಿಟ್‌.

ಇತ್ತೀಚೆಗೆ ತೆಲುಗಿನ ಜನಪ್ರಿಯ ಟಿವಿ ವಾಹಿನಿಯೊಂದರ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ರಾಧಾ, ಕೃಷ್ಣನನ್ನು ನೆನೆಸಿ ಕಣ್ಣೀರಿಟ್ಟರು. “ಅವನು ಈ ಲೋಕ ಬಿಟ್ಟು ಹೋಗಿದ್ದಾನೆಂದು ನನಗೆ ಇನ್ನೂ ನಂಬಲಾಗುತ್ತಿಲ್ಲ. ನಾನು ಅವರನ್ನು ತುಂಬಾ ಮಿಸ್‌ ಮಾಡಿಕೊಳ್ಳುತ್ತಿದೇನೆ, ನಾನು ಅವರನ್ನು ನಿಜವಾಗಿಯೂ ಪ್ರೀತಿಸುತ್ತೇನೆ ಎಂದು ಕಣ್ಣೀರಿಟ್ಟರು.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!