150 ಅನಾಥ ಮಕ್ಕಳನ್ನು ದತ್ತು ಪಡೆದ ಲಾರೆನ್ಸ್: ನೀನು ʻದೇವರು‌ʼ ಅಂತಿದಾರೆ ಫ್ಯಾನ್ಸ್!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ರಾಘವ ಲಾರೆನ್ಸ್ ಈಗಾಗಲೇ ನೃತ್ಯ ನಿರ್ದೇಶಕರಾಗಿ, ನಟರಾಗಿ, ನಿರ್ದೇಶಕರಾಗಿ ಹಲವು ಚಿತ್ರಗಳ ಮೂಲಕ ರಂಜಿಸಿದ್ದಾರೆ. ಲಾರೆನ್ಸ್ ಸಿನಿಮಾಗಳಲ್ಲಿ ಹೆಸರು, ಕೀರ್ತಿ, ಹಣ ಗಳಿಸಿ ಒಳ್ಳೆಯ ಕೆಲಸಗಳ ಮೂಲಕ ಜನರ ಮನೆ ಮಾತಾಗಿದ್ದಾರೆ. ಲಾರೆನ್ಸ್ ಹಲವು ವರ್ಷಗಳಿಂದ ಹಲವಾರು ಸೇವಾ ಕಾರ್ಯಕ್ರಮಗಳನ್ನು ಮಾಡುತ್ತಾ ಬಂದಿದ್ದಾರೆ. ಹಲವು ಮಕ್ಕಳನ್ನು ದತ್ತು ಪಡೆದು ಅವರ ವಿದ್ಯಾಭ್ಯಾಸಕ್ಕೆ ಬೇಕಾದ ಎಲ್ಲವನ್ನೂ ಒದಗಿಸಿಕೊಡುವ ಜತೆಗೆ ಅನಾಥಾಶ್ರಮವನ್ನೂ ನಡೆಸುತ್ತಿದ್ದಾರೆ.

ಸದ್ಯ ರಾಘವ ಲಾರೆನ್ಸ್ ರುದ್ರುಡು ಸಿನಿಮಾದಲ್ಲಿ ಬರುತ್ತಿದ್ದಾರೆ. ರಾಘವ ಲಾರೆನ್ಸ್ ಮತ್ತು ಪ್ರಿಯಾ ಭವಾನಿ ಶಂಕರ್ ಅಭಿನಯದ ರುದ್ರುಡು ತೆಲುಗು ಮತ್ತು ತಮಿಳಿನಲ್ಲಿ ಏಪ್ರಿಲ್ 14 ರಂದು ಬಿಡುಗಡೆಯಾಗಲಿದೆ. ಕಳೆದ ಕೆಲವು ದಿನಗಳಿಂದ ಚಿತ್ರತಂಡ ಈ ಚಿತ್ರದ ಪ್ರಚಾರದಲ್ಲಿ ಬ್ಯುಸಿಯಾಗಿದೆ. ಇತ್ತೀಚೆಗೆ, ರುದ್ರುಡು ಪ್ರಚಾರದ ಭಾಗವಾಗಿ ಲಾರೆನ್ಸ್ ಮತ್ತೊಂದು ಒಳ್ಳೆಯ ವಿಷಯವನ್ನು ಘೋಷಿಸಿದರು.

ಮತ್ತಷ್ಟು ಅನಾಥ ಮಕ್ಕಳನ್ನು ಪ್ರಚಾರದ ವೇದಿಕೆಗೆ ಕರೆತಂದು ಅವರೊಂದಿಗೆ ಫೋಟೋ ತೆಗೆಸಿಕೊಂಡರು. ಆ ಫೋಟೋವನ್ನು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. “ಇದನ್ನೆಲ್ಲ ರುದ್ರುಡು ವೇದಿಕೆಯಿಂದಲೇ ನಿಮಗೆ ತಿಳಿಸಲು ಸಂತಸವಾಗುತ್ತಿದೆ. ನನಗೆ ನಿಮ್ಮೆಲ್ಲರ ಆಶೀರ್ವಾದ ಬೇಕು” ಎಂದು ಪೋಸ್ಟ್ ಮಾಡಿದ್ದಾರೆ. ಇದರೊಂದಿಗೆ ಮತ್ತೊಮ್ಮೆ ಎಲ್ಲರೂ ಲಾರೆನ್ಸ್ ಅವರನ್ನು ಅಭಿನಂದಿಸಿ, ನೀನು ಕಣ್ಣಿಗೆ ಕಾಣುವ ದೇವರು ಎಂದು ಅಭಿಮಾನಿಗಳು ಹೊಗಳುತ್ತಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!