ಹೊಸದಿಗಂತ ವರದಿ, ಮಂಡ್ಯ :
ಕಾಂಗ್ರೆಸ್ ಅಭ್ಯರ್ಥಿ ಪರ ಚುನಾವಣಾ ಪ್ರಚಾರಕ್ಕಾಗಿ ಆಗಮಿಸಿದ ರಾಹುಲ್ಗಾಂಧಿ ಅವರ ಹೆಲಿಕಾಪ್ಟರ ಅನ್ನು ಚುನಾವಣಾಧಿಕಾರಿಗಳು ಮಂಡ್ಯದಲ್ಲಿ ತಪಾಸಣೆ ನಡೆಸಿದ ಪ್ರಸಂಗ ನಡೆದಿದೆ.
ಕೇರಳದಿಂದ ಮಂಡ್ಯಕ್ಕೆ ಹೆಲಿಕಾಪ್ಟರ್ ಮೂಲಕ ನಗರದ ಪಿಇಟಿ ಕ್ರೀಡಾಂಗಣದಲ್ಲಿ ನಿರ್ಮಿಸಲಾಗಿದ್ದ ಹೆಲಿಪ್ಯಾಡ್ಗೆ ರಾಹುಲ್ಗಾಂಧಿ ಬಂದಿದ್ದಾರೆ. ಈ ಸಂದರ್ಭ ಸ್ಥಳಕ್ಕೆ ಧಾವಿಸಿದ ಚುನಾವಣಾ ಕರ್ತವ್ಯದಲ್ಲಿದ್ದ ತಂಡ ರಾಹುಲ್ ಹೆಲಿಕಾಪ್ಟರ್ ನಿಂದ ಇಳಿದ ಬಳಿಕ ಆಸನಗಳನ್ನು ಸೇರಿದಂತೆ ಎಲ್ಲಡೆ ತಪಾಸಣೆ ಮಾಡಿದ್ದಾರೆ.
ಇದೇ ಹೆಹೆಲಿಕ್ಯಾಪ್ಟರ್ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸಹ ಇದ್ದರು.