ರೈಲು ದುರಂತ ಸ್ಥಳದಲ್ಲಿ ನಡೆಯುತ್ತಿದೆ ಹಳಿಗಳ ದುರಸ್ತಿ ಕಾರ್ಯಾಚರಣೆ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಒಡಿಶಾ ಸರಣಿ ರೈಲು ಅಪಘಾತದ ಬಳಿಕ ಬಹನಾಗ ಬಜಾರ್ ಬಳಿಯ ಘಟನಾ ಸ್ಥಳದಲ್ಲಿನ ಬೋಗಿಗಳನ್ನು ಬಹುತೇಕ ತೆರವುಗೊಳಿಸಲಾಗಿದ್ದು, ಹಳಿಗಳನ್ನು ಪರಿಶೀಲಿಸಿ ಸರಿಪಡಿಸಲಾಗುತ್ತಿದೆ.

ಬುಲ್​ಡೋಜರ್, ಕ್ರೇನ್​ಗಳನ್ನು ಆಪರೇಟ್ ಮಾಡುವ ಜನರ ತಂಡದೊಂದಿಗೆ ಸೇರಿ ರಾತ್ರಿಯಿಡೀ ಕಾರ್ಯಾಚರಣೆ ನಡೆಸಿ ಬೋಗಿಗಳು, ಇತರ ಅವಶೇಷಗಳನ್ನು ತೆರವುಗೊಳಿಸಲಾಗಿದೆ. ಮೇಲೆ ಹಾದು ಹೋಗುವ ಎಲೆಕ್ಟ್ರಿಕ್ ಕೇಬಲ್​ಗಳನ್ನೂ ಮರುಸ್ಥಾಪಿಸಲಾಗುತ್ತಿದೆ.

ಈ ಮೂಲಕ ಬಹಂಗಾ ರೈಲು ನಿಲ್ದಾಣದ ಬಳಿ ಎಲ್ಲಾ ಟ್ರ್ಯಾಕ್​ಗಳನ್ನು ಬಹಳ ಶೀಘ್ರದಲ್ಲಿ ಓಡಾಟಕ್ಕೆ ಅನುವು ಮಾಡಿಕೊಡುವತ್ತ ಪ್ರಯತ್ನಿಸಲಾಗುತ್ತಿದೆ. ಭಾನುವಾರ ರಾತ್ರಿ ಹೊತ್ತಿಗೆ ಕನಿಷ್ಠ ಎರಡು ರೈಲ್ವೆ ಲೈನ್​ಗಳಾದರೂ ಬಳಕೆಗೆ ಸಿಗಲಿದೆ ಎಂದು ರೈಲ್ವೆ ಬೋರ್ಡ್ ಹೇಳಿದೆ.

ಈ ಮಾರ್ಗ ದಕ್ಷಿಣ ಭಾರತ ಮತ್ತು ಈಶಾನ್ಯಕ್ಕೆ ಇದು ಸಂಪರ್ಕ ಕಲ್ಪಿಸುತ್ತದೆ. ಆದಷ್ಟೂ ಬೇಗ ಈ ಮಾರ್ಗದ ಪುನಶ್ಚೇತನ ಆಗುವುದು ಮುಖ್ಯ. ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಈ ಕುರಿತು ಮಾತನಾಡಿ, ಜೂನ್ 6, ಮಂಗಳವಾರದೊಳಗೆ ಈ ಮಾರ್ಗವನ್ನು ಸಂಪೂರ್ಣವಾಗಿ ಬಳಕೆಗೆ ಸಿದ್ಧಪಡಿಸಲಾಗುವುದು ಎಂದಿದ್ದಾರೆ. ಎರಡು ಲೈನ್​ಗಳನ್ನಾದರೂ ನಾವು ಆದಷ್ಟೂ ಬೇಗ ಸರಿಪಡಿಸುತ್ತೇವೆ ಎಂದು ರೈಲ್ವೆ ಅಧಿಕಾರಿಯೊಬ್ಬರೂ ಪುನರುಚ್ಚರಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!