ಬಿಸಿಸಿಐ ಬಿಜೆಪಿ ಮನಸ್ಥಿತಿಗೆ ಸಿಲುಕಿದೆ ಎಂದ ರಮೀಜ್​​ ರಾಜಾಗೆ ಸಿಕ್ಕಿತು ಖಡಕ್ ತಿರುಗೇಟು!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಪಾಕ್ ಮಾಜಿ ಆಟಗಾರ ರಮೀಜ್​ ರಾಜಾ ಮತ್ತೆ ಭಾರತದ ವಿರುದ್ಧ ಕಿಡಿಕಾರಿದ್ದು, ಪಾಕಿಸ್ತಾನ ಕ್ರಿಕೆಟ್​ ಪ್ರಗತಿಯನ್ನು ಹಾಳುಮಾಡುವ ಉದ್ದೇಶದಿಂದ ದುರದೃಷ್ಟವಶಾತ್ ಬಿಸಿಸಿಐ ಬಿಜೆಪಿ ಮನಸ್ಥಿತಿಗೆ ಸಿಲುಕಿದೆ ಎಂಬ ಅಸಮಾಧಾನ ವ್ಯಕ್ಯಪಡಿಸಿದ್ದಾರೆ.

ಏಷ್ಯಾ ಕಪ್​ ವಿಚಾರದಲ್ಲಿ ಈ ಹಿಂದೆಯೂ ಬಿಸಿಸಿಐ ವಿರುದ್ಧ ಹಲವು ಬಾರಿ ಕಿತ್ತಾಡಿದ್ದ ರಾಜಾ , ಇದೀಗ ಪಾಕ್​ ಕ್ರಿಕೆಟ್​ ಮಂಡಳಿಯ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿದ ಬಳಿಕ ಮತ್ತೆ ಮಾತನಾಡಿದ್ದಾರೆ.

ಬಿಸಿಸಿಐ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಹೇಳಿದಂತೆ ನಡೆದುಕೊಳ್ಳುತ್ತಿದೆ. ಕೆಂದ್ರ ಸರ್ಕಾರ ಏನು ಹೇಳುತ್ತದೆಯೋ ಅದನ್ನೇ ಬಿಸಿಸಿಐ ಪಾಲಿಸುತ್ತಿದೆ. ಈ ಮೂಲಕ ಪಾಕಿಸ್ತಾನ ಕ್ರಿಕೆಟ್​ ಬೆಳವಣಿಗೆಯನ್ನು ನಾಶಮಾಡಲು ಆರಂಭಸಿದೆ ಎಂದು ರಮೀಜ್​ ರಾಜಾ ಹೇಳಿದರು.

ಇದಕ್ಕೆ ಪ್ರತಿಕ್ರಿಯೆ ನೀಡಿದ ಬಿಸಿಸಿಐ, ರಮಿಜ್​ ರಾಜಾ ಹತಾಶ ಸ್ವಭಾವದ ವ್ಯಕ್ತಿ. ಪಾಕ್​ ಕ್ರಿಕೆಟ್​ ಮಂಡಳಿಯ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿದ ಬಳಿಕ ಅವರು ತೀರಾ ಹತಾಶೆಯಾಗಿದ್ದಾರೆ. ಈ ಸೇಡನ್ನು ಬಿಸಿಸಿಐ ವಿರುದ್ಧ ತೀರಿಸಲು ಮುಂದಾಗಿದ್ದಾರೆ. ಇದೇ ಕಾರಣಕ್ಕೆ ಈ ರೀತಿಯ ಕೆಳಮಟ್ಟದ ಹೇಳಿಕೆ ನೀಡುತ್ತಿದ್ದಾರೆ. ಕ್ರಿಕೆಟ್​ ಜತೆಗೆ ರಾಜಕೀಯ ಬೆರೆಸುವುದು ಸರಿಯಲ್ಲ ಇನ್ನಾದರು ಪ್ರಬುದ್ಧ ಮನಸ್ಥಿತಿಯಿಂದ ವರ್ತಿಸಿ ಎಂದು ತಿರುಗೇಟು ನೀಡಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!