ಹೊಸದಿಗಂತ ಡಿಜಿಟಲ್ ಡೆಸ್ಕ್:
ಪಾಕ್ ಮಾಜಿ ಆಟಗಾರ ರಮೀಜ್ ರಾಜಾ ಮತ್ತೆ ಭಾರತದ ವಿರುದ್ಧ ಕಿಡಿಕಾರಿದ್ದು, ಪಾಕಿಸ್ತಾನ ಕ್ರಿಕೆಟ್ ಪ್ರಗತಿಯನ್ನು ಹಾಳುಮಾಡುವ ಉದ್ದೇಶದಿಂದ ದುರದೃಷ್ಟವಶಾತ್ ಬಿಸಿಸಿಐ ಬಿಜೆಪಿ ಮನಸ್ಥಿತಿಗೆ ಸಿಲುಕಿದೆ ಎಂಬ ಅಸಮಾಧಾನ ವ್ಯಕ್ಯಪಡಿಸಿದ್ದಾರೆ.
ಏಷ್ಯಾ ಕಪ್ ವಿಚಾರದಲ್ಲಿ ಈ ಹಿಂದೆಯೂ ಬಿಸಿಸಿಐ ವಿರುದ್ಧ ಹಲವು ಬಾರಿ ಕಿತ್ತಾಡಿದ್ದ ರಾಜಾ , ಇದೀಗ ಪಾಕ್ ಕ್ರಿಕೆಟ್ ಮಂಡಳಿಯ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿದ ಬಳಿಕ ಮತ್ತೆ ಮಾತನಾಡಿದ್ದಾರೆ.
ಬಿಸಿಸಿಐ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಹೇಳಿದಂತೆ ನಡೆದುಕೊಳ್ಳುತ್ತಿದೆ. ಕೆಂದ್ರ ಸರ್ಕಾರ ಏನು ಹೇಳುತ್ತದೆಯೋ ಅದನ್ನೇ ಬಿಸಿಸಿಐ ಪಾಲಿಸುತ್ತಿದೆ. ಈ ಮೂಲಕ ಪಾಕಿಸ್ತಾನ ಕ್ರಿಕೆಟ್ ಬೆಳವಣಿಗೆಯನ್ನು ನಾಶಮಾಡಲು ಆರಂಭಸಿದೆ ಎಂದು ರಮೀಜ್ ರಾಜಾ ಹೇಳಿದರು.
ಇದಕ್ಕೆ ಪ್ರತಿಕ್ರಿಯೆ ನೀಡಿದ ಬಿಸಿಸಿಐ, ರಮಿಜ್ ರಾಜಾ ಹತಾಶ ಸ್ವಭಾವದ ವ್ಯಕ್ತಿ. ಪಾಕ್ ಕ್ರಿಕೆಟ್ ಮಂಡಳಿಯ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿದ ಬಳಿಕ ಅವರು ತೀರಾ ಹತಾಶೆಯಾಗಿದ್ದಾರೆ. ಈ ಸೇಡನ್ನು ಬಿಸಿಸಿಐ ವಿರುದ್ಧ ತೀರಿಸಲು ಮುಂದಾಗಿದ್ದಾರೆ. ಇದೇ ಕಾರಣಕ್ಕೆ ಈ ರೀತಿಯ ಕೆಳಮಟ್ಟದ ಹೇಳಿಕೆ ನೀಡುತ್ತಿದ್ದಾರೆ. ಕ್ರಿಕೆಟ್ ಜತೆಗೆ ರಾಜಕೀಯ ಬೆರೆಸುವುದು ಸರಿಯಲ್ಲ ಇನ್ನಾದರು ಪ್ರಬುದ್ಧ ಮನಸ್ಥಿತಿಯಿಂದ ವರ್ತಿಸಿ ಎಂದು ತಿರುಗೇಟು ನೀಡಿದೆ.