ಹೊಸದಿಗಂತ ಡಿಜಿಟಲ್ ಡೆಸ್ಕ್:
ಅಯೋಧ್ಯೆಯಲ್ಲಿ ರಾಮಲಲಾ ಪ್ರತಿಷ್ಠಾಪನೆಗೆ ಕ್ಷಣಗಣನೆ ಆರಂಭವಾಗಿದ್ದು, ರಾಮ ಪ್ರಾಣಪ್ರತಿಷ್ಠಾ ಕಾರ್ಯಕ್ರಮದಲ್ಲಿ ಭಾಗವಹಿಸುವ ಗಣ್ಯರಿಗೆ ಕರ್ನಾಟಕದಿಂದ ವಿಶೇಷ ಉಡುಗೊರೆ ನೀಡಲಾಗುವುದು.
ಕೇವಲ ಮುಕ್ಕಾಲು ಇಂಚಿನ ಎತ್ತರದ ರಾಮಲಲಾ ವಿಗ್ರಹಗಳನ್ನು ಹೆಸರಾಂತ ಕಲಾವಿದೆ ಸಚಿನ್ ಸಂಘೆ ಅವರಿಂದ ನಿಯೋಜಿಸಲಾಯಿತು ಮತ್ತು ಒಂದು ಭಾಗವನ್ನು ಪೂರ್ಣಗೊಳಿಸಲು 12 ಗಂಟೆಗಳನ್ನು ತೆಗೆದುಕೊಂಡಿತು.
ಇದು ಸತತ ಪ್ರಯತ್ನದ ಫಲ. ನಿನ್ನೆಯೇ ಆರು ರಾಮ ಮೂರ್ತಿಗಳನ್ನು ಅಯೋಧ್ಯೆಗೆ ಸಚಿನ್ ಸಂಘೆ ಕಳುಹಿಸಿದರು. ಅರುಣ್ ಯೋಗಿರಾಜ್ ರೀತಿಯಲ್ಲೇ ತನ್ನ ಕಲ್ಪನೆ ಬಾಲರಾಮನನ್ನುಸಚಿನ್ ಸಂಘೆ ಸೃಷ್ಟಿಸಿದರು.
ಇದಕ್ಕೂ ಮುನ್ನ ಸಚಿನ್ ಸಂಘೆ ಅವರು ಚಾಕ್ ಪೀಸ್ ನಲ್ಲಿ ಬಿಡಿಸಿ ಮಾಡಿದ ವಿವಿಧ ಯೋಗಾಸನ ಭಂಗಿಗಳನ್ನು ಪ್ರಧಾನಿ ಮೋದಿಗೆ ಉಡುಗೊರೆಯಾಗಿ ನೀಡಿದ್ದರು. ರಾಮನನ್ನು ಪೆನ್ಸಿಲ್ನಿಂದ ಚಿತ್ರಿಸಿದ ಕಲಾವಿದ ಸಚಿನ್ ಸಂಘೆ ಅವರ ಲಲಿತಕಲೆಗಾಗಿ ರಾಮಮಂದಿರ ಟ್ರಸ್ಟ್ನಿಂದ ಸನ್ಮಾನಿಸಲಾಯಿತು. ನಾನು ಹೋಗುವುದಕ್ಕೆ ಆಗಲ್ಲ..ಆದ್ರೆ ನನ್ನ ಕಲೆ ಹೋಗುತ್ತಿರುವುದು ಖುಷಿಯಾಗ್ತಿದೆ ಎಂದು ಕಲಾವಿದ ಹೇಳಿದರು.