ರಣಜಿ ಟ್ರೋಫಿ: ಕ್ವಾರ್ಟರ್​ ಫೈನಲ್​ ನಲ್ಲಿ ಸೋತು ಟೂರ್ನಿಯಿಂದ ಹೊರಬಿದ್ದ ಕರ್ನಾಟಕ

ಹೊಸದಿಗಂತ ಡಿಜಿಟಲ್ ಡೆಸ್ಕ್‌

ಉತ್ತರ ಪ್ರದೇಶ-ಕರ್ನಾಟಕ ತಂಡಗಳ ನಡುವಿನ ರಣಜಿ ಟ್ರೋಫಿಯ ಕ್ವಾರ್ಟರ್​ ಫೈನಲ್​ ಪಂದ್ಯದಲ್ಲಿ ಮನೀಷ್ ಪಾಂಡೆ ನೇತೃತ್ವದ ಕರ್ನಾಟಕ ಸೋಲು ಕಂಡಿತು. ಈ ಮೂಲಕ ಟೂರ್ನಿಯಿಂದ ಹೊರಬಿದ್ದಿದೆ.
ಆಲೂರಿನ ಕೆಎಸ್​ಸಿಎ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಕರ್ನಾಟಕ ನೀಡಿದ 213ರನ್​ಗಳ ಗುರಿ ಬೆನ್ನತ್ತಿದ್ದ ಉತ್ತರ ಪ್ರದೇಶ ತಂಡ 5 ವಿಕೆಟ್​​ಗಳ ಜಯ ದಾಖಲಿಸಿ, ಸೆಮಿಫೈನಲ್​ ಪ್ರವೇಶಿಸಿತು
ತಂಡದ ಪರ 2ನೇ ಇನ್ನಿಂಗ್ಸ್​​​ನಲ್ಲಿ ತಾಳ್ಮೆಯ ಬ್ಯಾಟಿಂಗ್​ ಪ್ರದರ್ಶಿಸಿದ ಕ್ಯಾಪ್ಟನ್​ ಕರಣ್ ಶರ್ಮಾ(93) ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು.
ಮೊದಲ ಇನ್ನಿಂಗ್ಸ್​​ನಲ್ಲಿ ಕರ್ನಾಟಕ 253ರನ್​​ಗಳಿಸಿತ್ತು. ಇದಕ್ಕೆ ಪ್ರತ್ಯುತ್ತರವಾಗಿ ಉತ್ತರ ಪ್ರದೇಶ ಕೇವಲ 155ರನ್​​ಗಳಿಗೆ ಆಲೌಟ್​ ಆಗಿತ್ತು.ಎರಡನೇ ಇನ್ನಿಂಗ್ಸ್​​ನಲ್ಲಿ ಕರ್ನಾಟಕ ಕೇವಲ 114ರನ್​​ಗಳಿಗೆ ಆಲೌಟ್​ ಆಗಿ, ಯುಪಿ ತಂಡಕ್ಕೆ 213ರನ್​ಗಳ ಗೆಲುವಿನ ಗುರಿ ನೀಡಿತ್ತು.
ಈ ಗುರಿ ಬೆನ್ನತ್ತಿದ್ದ ಉತ್ತರ ಪ್ರದೇಶ 5 ವಿಕೆಟ್ ನಷ್ಟಕ್ಕೆ 213ರನ್​ಗಳಿಸಿ, ಗೆಲುವು ಸಾಧಿಸಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!