ಹೊಸದಿಗಂತ ಡಿಜಿಟಲ್ ಡೆಸ್ಕ್:
ಈ ಬಾರಿ ರಾಜಧಾನಿ ಬೆಂಗಳೂರಿನಲ್ಲಿ ಮೊದಲ ಆರ್ಸಿಬಿ ಪಂದ್ಯ ನಡೆಯಲಿದೆ.
ಈಗಾಗಲೇ ಉದ್ಘಾಟನಾ ಪಂದ್ಯದಲ್ಲಿ ಆರ್ಸಿಬಿ ಸೋಲು ಕಂಡಿದೆ. ಮೊದಲ ಪಂದ್ಯ ದೇವರಿಗೆ ಎನ್ನುವ ತಮಾಷೆಗಳ ಮಧ್ಯೆ ದ್ವಿತೀಯ ಪಂದ್ಯಕ್ಕೆ ಆರ್ಸಿಬಿ ತಯಾರಾಗಿದ್ದು, ಇಂದು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಪಂಜಾಬ್ ವಿರುದ್ಧ ಹಣಾಹಣಿ ನಡೆಸಲಿದೆ.
ಆರ್ಸಿಬಿಗೆ ಇದು ತವರಿನಲ್ಲಿ ಮೊದಲು ಪಂದ್ಯವಾಗಿದ್ದು, ಸ್ಟೇಡಿಯಂನಲ್ಲಿ ಬಹುತೇಕ ಆರ್ಸಿಬಿ ಅಭಿಮಾನಿಗಳೇ ಕಾಣಿಸಲಿದ್ದಾರೆ.
ಇಂದಿನಿಂದ ಚಿನ್ನಸ್ವಾಮಿ ಮೈದಾನದಲ್ಲಿ ಐಪಿಎಲ್ ಪಂದ್ಯಾವಳಿ ಶುರುವಾಗಲಿದೆ. ಹೀಗಾಗಿ ಪೊಲೀಸರು ಅಲರ್ಟ್ ಆಗಿದ್ದಾರೆ. ರಾಮೇಶ್ವರಂ ಕೆಫೆ ಬಾಂಬ್ ಬ್ಲಾಸ್ಟ್ ಬೆನ್ನಲ್ಲೆ ಖಾಕಿ ಅಲರ್ಟ್ ಆಗಿದ್ದು ಕಳೆದ ಒಂದು ವಾರದಿಂದಲೇ ಸ್ಟೇಡಿಯಂ ಇಂಚಿಂಚೂ ತಪಾಸಣೆ ನಡೆಸಿದ್ದಾರೆ. ಬಂದೋಬಸ್ತ್ಗಾಗಿ ಒಂದು ಸಾವಿರ ಪೊಲೀಸರ ನಿಯೋಜನೆ ಮಾಡಲಾಗಿದೆ. ಪ್ರತಿ ಭಾರಿಗಿಂತ ಈ ಭಾರಿ ದುಪ್ಪಟ್ಟು ಭದ್ರತೆ ಕಲ್ಪಿಸಲಾಗಿದೆ.