ರೆಬೆಲ್ ಸ್ಟಾರ್ ಕೃಷ್ಣಂ ರಾಜು ನಿಧನ: ಶೋಕ ಸಾಗರದಲ್ಲಿ ಟಾಲಿವುಡ್!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಅನಾರೋಗ್ಯದಿಂದಾಗಿ ಟಾಲಿವುಡ್‌ ರೆಬೆಲ್ ಸ್ಟಾರ್ ಅಂತಲೇ ಹೆಸರಾದ ಕೃಷ್ಣಂರಾಜು ಕೊನೆಯುಸಿರೆಳೆದಿದ್ದಾರೆ. ಗಚ್ಚಿಬೌಲಿ ಎಜಿಐ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಇಂದು ಬೆಳಗಿನ ಜಾವ 3:25ಕ್ಕೆ ಇಹಲೋಕ ತ್ಯಜಿಸಿದರು. ಸಾಮಾನ್ಯವಾಗಿ ಈಗಿನ ಪೀಳಿಗೆಯವರಿಗೆ ರೆಬಲ್‌ ಸ್ಟಾರ್‌ ಅಂದ್ರೆ ನೆನಪಿಗೆ ಬರುವುದು ಪ್ಯಾನ್ ಇಂಡಿಯಾದ ಸ್ಟಾರ್ ಪ್ರಭಾಸ್, ಆದರೆ ನಿಜವಾದ ರೆಬೆಲ್ ಸ್ಟಾರ್ ಎಂದರೆ ಅದು ಕೃಷ್ಣಂರಾಜು ಮಾತ್ರ. ಪ್ರಭಾಸ್‌ಗೆ ಕೃಷ್ಣರಾಜು ಸಂಬಂಧದಲ್ಲಿ ದೊಡ್ಡಪ್ಪ ಆಗ್ತಾರೆ. ಜನವರಿ 20, 1940 ರಂದು ಜನಿಸಿದ ರೆಬೆಲ್ ಸ್ಟಾರ್ ಅವರ ಮೂಲ ಹೆಸರು ಉಪ್ಪಲಪಾಟಿ ಕೃಷ್ಣಮರಾಜು. 1966ರಲ್ಲಿ ಚಿಲಕಾಗೋರಿಂಕ ಚಿತ್ರದ ಮೂಲಕ ಸಿನಿ ಲೋಕಕ್ಕೆ ಪಾದಾರ್ಪಣೆ ಮಾಡಿದ ಕೃಷ್ಣಂರಾಜು 183ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದರು.

ನಟರಾಗಿ ಒಟ್ಟು 5 ಫಿಲ್ಮ್‌ಫೇರ್ ಪ್ರಶಸ್ತಿಗಳು ಮತ್ತು 3 ನಂದಿ ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡಿದ್ದಾರೆ. ಸಿನಿಮಾ ಅಷ್ಟೇ ಅಲ್ಲದೆ ರಾಜಕಾರಣಿಯಾಗಿಯೂ ಸೇವೆ ಸಲ್ಲಿಸಿದರು. ಕೆಲ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಇಂದು ಮುಂಜಾನೆ ಕೊನೆಯುಸಿರೆಳೆದಿದ್ದಾರೆ.

ಕೃಷ್ಣರಾಜು ಸಾವಿನ ಸುದ್ದಿ ಕೇಳಿ ಟಾಲಿವುಡ್ ಸೆಲೆಬ್ರಿಟಿಗಳು ಮತ್ತು ಅಭಿಮಾನಿಗಳು ಆಸ್ಪತ್ರೆಯತ್ತ ಭೇಟಿ ನೀಡುತ್ತಿದ್ದಾರೆ. ರೆಬೆಲ್ ಸ್ಟಾರ್ ಕೃಷ್ಣಂರಾಜು ನಿಧನ ಟಾಲಿವುಡ್‌ಗೆ ತುಂಬಲಾರದ ನಷ್ಟ ಎಂದೇ ಹೇಳಬೇಕು. ಪ್ರಮುಖ ಸಿನಿ ಗಣ್ಯರು, ಅಭಿಮಾನಿಗಳು ಸಂತಾಪ ಸೂಚಿಸುತ್ತಿದ್ದಾರೆ

 

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!