ಹೊಸದಿಗಂತ ವರದಿ, ಗೋಕರ್ಣ:
ಸಮುದ್ರ ಸುಳಿಗೆ ಸಿಲುಕಿ ಜೀವಾಪಾಯದಲ್ಲಿದ್ದ ಪ್ರವಾಸಿಗನನ್ನು ಜೀವ ರಕ್ಷಕ ಸಿಬ್ಬಂದಿ ರಕ್ಷಿಸಿದ ಘಟನೆ ಭಾನುವಾರ ಮಧ್ಯಾಹ್ನ ಕುಡ್ಲೆ ಕಡಲತೀರದಲ್ಲಿ ನಡೆದಿದೆ.
ಮುಂಬೈ ಮೂಲದ ನಿತೀಶಕುಮಾರ (೨೩) ಜೀವಾಪಾಯದಿಂದ ಪಾರಾಗಿ ಪ್ರವಾಸಿಗರಾಗಿದ್ದು, ಒಟ್ಟು ನಾಲ್ವರ ಇಲ್ಲಿಗೆ ಪ್ರವಾಸಿಕ್ಕೆ ಬಂದಿದ್ದು ಈಜಾಡಲು ತೆರಳಿದಾಗ ಈ ಅವಘಡ ನಡೆದಿದೆ. ಅಲೆಯ ಅಬ್ಬರಕ್ಕೆ ಕೊಚ್ಚಿ ಹೋಗುತ್ತಿದ್ದ ಪ್ರವಾಸಿಗನನ್ನು ಗಮನಿಸಿದ ಕರ್ತವ್ಯದಲ್ಲಿದ್ದ ಜೀವರಕ್ಷಕ ಸಿಬ್ಬಂದಿ ತಮ್ಮ ಜೀವದ ಹಂಗು ತೊರೆದು ಜೀವರಕ್ಷಿಸಿದ್ದಾರೆ.