ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯಾದ್ಯಂತ ಅಕ್ಕಿ ಗಲಾಟೆ ತಾರಕಕ್ಕೇರಿದ್ದು, ಇಂದು ಬಿಜೆಪಿ ಹಾಗೂ ಕಾಂಗ್ರೆಸ್ ಬೇರೆ ಬೇರೆ ವಿಷಯಗಳಿಗಾಗಿ ಪ್ರತಿಭಟನೆ ನಡೆಸುತ್ತಿದೆ.
ಕೇಂದ್ರ ಈ ಹಿಂದೆ ಅಕ್ಕಿ ಕೊಡುತ್ತೀವಿ ಎಂದು ಹೇಳಿ, ಈಗ ಆಗೋದಿಲ್ಲ ಎನ್ನುತ್ತಿದೆ, ಇದು ದ್ವೇಷದ ರಾಜಕಾರಣ, ಈ ನೀತಿಯನ್ನು ವಿರೋಧಿಸಿ ಕಾಂಗ್ರೆಸ್ ಪ್ರತಿಭಟನೆ ನಡೆಸುತ್ತಿದೆ.
ಇನ್ನು ಅನ್ನಭಾಗ್ಯ ಜಾರಿಗೆ ಮಾಡಬೇಕಾದ್ದು ಕಾಂಗ್ರೆಸ್ ಕರ್ತವ್ಯ, ಜು.1ರಿಂದ 10 ಕೆ.ಜಿ ಅಕ್ಕಿ ನೀಡಬೇಕು ಇಲ್ಲವಾದರೆ ಸುಮ್ಮನಿರೋದಿಲ್ಲ ಎಂದು ಬಿಜೆಪಿ ಪ್ರತಿಭಟನೆ ನಡೆಸುತ್ತಿದೆ. ಒಟ್ಟಾರೆ ಅಕ್ಕಿ ಗಲಾಟೆ ತೀವ್ರ ಸ್ವರೂಪ ಪಡೆಯುತ್ತಿದ್ದು, ಇದು ಎಲ್ಲಿಗೆ ಹೋಗಿ ಮುಟ್ಟಲಿದೆ ಕಾದು ನೋಡಬೇಕಿದೆ.