ಹೊಸದಿಗಂತ ಡಿಜಿಟಲ್ ಡೆಸ್ಕ್:
ರಿಷಭ್ ಶೆಟ್ಟಿ ಇದೀಗ ಪ್ಯಾನ್ ಇಂಡಿಯಾ ಸ್ಟಾರ್, ಮುಂಬೈನಲ್ಲಿ ಸಾಕಷ್ಟು ಸಂದರ್ಶನಗಳನ್ನು ರಿಷಭ್ ಶೆಟ್ಟಿ ನೀಡ್ತಿದ್ದಾರೆ. ಮುಂಬೈನಲ್ಲಿರುವ ಶಾರುಖ್ ಮನೆ ಮುಂದೆ ಜನಸಾಗರ ನೋಡಿ ರಿಷಭ್ ಆಶ್ಚರ್ಯಪಟ್ಟಿದ್ದಾರೆ. ಇಷ್ಟೊಂದು ಜನ ಇಲ್ಲಿ ಯಾಕಿದ್ದಾರೆ ಅನ್ನೋ ಪ್ರಶ್ನೆ ಅವರಿಗೆ ಎದುರಾಗಿದೆ.
ಕಾಂತಾರ ಚಿತ್ರದ ರಿಲೀಸ್ ನಂತರ ಮುಂಬೈನಲ್ಲಿ ಸಾಕಷ್ಟು ಸಂದರ್ಶನ ನೀಡಿದ್ದು, ಶಾರುಖ್ ಮನೆ ಮುಂದೆ ಜನಸಾಗರ ನೋಡಿ ಅಚ್ಚರಿಪಟ್ಟು, ಇಲ್ಲಿ ಇಷ್ಟೊಂದು ಜನ ಇರೋದು ಯಾಕೆ ಎಂದು ಡ್ರೈವರ್ನ್ನು ಪ್ರಶ್ನಿಸಿದ್ದಾರೆ. ಡ್ರೈವರ್ ಇದು, ಶಾರುಖ್ ಸರ್ ಮನೆ, ಇಲ್ಲಿ ಜನ ಹೀಗೆ ಯಾವಾಗಲೂ ಇರ್ತಾರೆ ಎಂದು ಹೇಳಿದ್ದಾರೆ. ಶಾರುಖ್ ಅಭಿಮಾನಿಗಳನ್ನು ಕಂಡು ರಿಷಭ್ ಅಚ್ಚರಿಪಟ್ಟಿದ್ದೆ ಎಂದಿದ್ದಾರೆ.