ಮದ್ದೂರು ಬಳಿ ರಸ್ತೆ ಅವಘಡ: ಕೊಡಗಿನ ಯುವಕ ಸಾವು

ಹೊಸದಿಗಂತ ವರದಿ,ಮಡಿಕೇರಿ:

ಸಂಬಂಧಿಕರ ಮದುವೆ‌ ಮುಗಿಸಿ ಬೆಂಗಳೂರಿಗೆ‌ ತೆರಳುತ್ತಿದ್ದ ಯುವಕನೊಬ್ಬ‌ ರಸ್ತೆ ಅವಘಡದಲ್ಲಿ ಸಾವನ್ನಪ್ಪಿರುವ ಘಟನೆ ಮಂಗಳವಾರ ಮಂಡ್ಯ ಸಮೀಪದ‌ ಮದ್ದೂರಿನಲ್ಲಿ‌ ನಡೆದಿದೆ.
ಪೊನ್ನಂಪೇಟೆ ತಾಲೂಕಿನ ತೂಚಮಕೇರಿ ನಿವಾಸಿ ಪುಟ್ಟಂಗಡ ದೀಕ್ಷಿತ್ ಅಯ್ಯಪ್ಪ (23) ಮೃತ ದುರ್ದೈವಿ.
ಕಳೆದ ಎರಡು ತಿಂಗಳಿಂದ ಬೆಂಗಳೂರಿನಲ್ಲಿ ಉದ್ಯೋಗದಲ್ಲಿದ್ದ ದೀಕ್ಷಿತ್ ಅಯ್ಯಪ್ಪ ಕಳೆದ ಎರಡು ದಿನಗಳ ಹಿಂದೆ ವೀರಾಜಪೇಟೆಯಲ್ಲಿ ನಡೆದ ಸಂಬಂಧಿಕರ ಮದುವೆ ಕಾರ್ಯಕ್ರಮಕ್ಕೆ ಆಗಮಿಸಿ ಮಂಗಳವಾರ ಬೆಳಗ್ಗೆ ಬೆಂಗಳೂರಿಗೆ ತನ್ನ ಎನ್’ಫೀಲ್ಡ್ ಬುಲ್ಲೆಟ್ ಬೈಕ್’ನಲ್ಲಿ ತೆರಳುತ್ತಿದ್ದರು ಎನ್ನಲಾಗಿದೆ. ಮದ್ದೂರು ಸಮೀಪ ರಾಷ್ಟ್ರೀಯ ಹೆದ್ದಾರಿಯಲ್ಲಿ ಲಾರಿಯ ಹಿಂಭಾಗಕ್ಕೆ ಡಿಕ್ಕಿ ಹೊಡೆದ ಪರಿಣಾಮ ತಲೆಯ ಭಾಗಕ್ಕೆ ತೀವ್ರ ಪೆಟ್ಟು ಬಿದ್ದು ಆತ ಸಾವಿಗೀಡಾಗಿದ್ದಾರೆ.
ತೂಚಮಕೇರಿ ನಿವಾಸಿ ಪುಟ್ಟಂಗಡ ರಮೇಶ್ ಹಾಗೂ ಪುಷ್ಪ ದಂಪತಿಯ ಪುತ್ರರಾಗಿರುವ ದೀಕ್ಷಿತ್ ಅಯ್ಯಪ್ಪನವರ ಅಂತ್ಯಕ್ರಿಯೆ ಬುಧವಾರ ಸ್ವಗ್ರಾಮದಲ್ಲಿ ನಡೆಯಲಿರುವುದಾಗಿ ಕುಟುಂಬದ‌ ಮೂಲಗಳು ತಿಳಿಸಿವೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!