ಕಲಬುರಗಿ ಕಾರಾಗೃಹದಲ್ಲಿ ಖೈದಿಗಳಿಗೆ ರಾಜಾತಿಥ್ಯ: ದಾಳಿ ನಡೆಸಿದ ಪೋಲಿಸರು, ಮೊಬೈಲ್, ರಾಡ್, ಸಿಗರೇಟು ವಶ

ಹೊಸದಿಗಂತವರದಿ,ಕಲಬುರಗಿ:

ಕಲಬುರಗಿ ನಗರದ ಹೊರವಲಯದ ಕೇಂದ್ರ ಕಾರಾಗೃಹದಲ್ಲಿ ಖೈದಿಗಳ ರಾಜಾತಿಥ್ಯದ ಪ್ರಕರಣಕ್ಕೆ ಸಂಬಂಧಿಸಿದಂತೆ ಕಲಬುರಗಿ ನಗರ ಪೋಲಿಸ್ ಆಯುಕ್ತ ಡಾ.ಶರಣಪ್ಪಾ ಢಘೆ ಅವರು ಕೇಂದ್ರ ಕಾರಾಗೃಹದ ಮೇಲೆ ದಾಳಿ ನಡೆಸಿ, ಪರಿಶೀಲನೆ ಕಾರ್ಯ ನಡೆಸಿದ್ದಾರೆ.

ನಗರ ಪೋಲಿಸ್ ಆಯುಕ್ತ ಡಾ. ಶರಣಪ್ಪಾ ಡಘೆ,ಉಪ ಪೋಲಿಸ್ ಆಯುಕ್ತ ಕನ್ನಿಕಾ ಸಿಕ್ರಿವಾಲ್ ನೇತೃತ್ವದಲ್ಲಿ ೫೦ಕ್ಕೂ ಅಧಿಕಾರಿಗಳು ನಾಲ್ಕು ಗಂಟೆಗಳ ಕಾಲಕ್ಕೂ ಅಧಿಕವಾಗಿ ಕೇಂದ್ರ ಕಾರಾಗೃಹದ ಮೇಲೆ ದಾಳಿ ನಡೆಸಿ, ಪರಿಶೀಲನೆ ಕಾರ್ಯ ನಡೆಸಿದ್ದು,ದಾಳಿ ವೇಳೆಯಲ್ಲಿ ಖೈದಿಗಳ ಬಳಿ ಎರಡು ಮೊಬೈಲ್,ರಾಡ್, ಬಿಡಿ, ಗುಟ್ಕಾ, ಸಿಗರೇಟು ಪ್ಯಾಕೇಟ್ ಬರಾಮತ್ತಾಗಿವೆ ಎಂದು ಪೋಲಿಸ್ ಆಯುಕ್ತ ಡಾ.ಶರಣಪ್ಪಾ ಡಘೆ ತಿಳಿಸಿದರು.

ವಿಡಿಯೋ ಮೂಲಕ ಕಾಲ ಮಾಡಿ ಮಾತನಾಡಿರುವ ಮೊಬೈಲ್ ಫೋನ್ ಕೂಡ ವಶಕ್ಕೆ ಪಡೆಯಲಾಗಿದೆ. ವಿಚಾರಣಾಧೀನ ಖೈದಿಗಳಾದ ವಿನೋದ, ಸಾಗರ್ ಹಾಗೂ ಸೋನು ಎಂಬಾತನನ್ನು ವಿಚಾರಣೆ ನಡೆಸಲಾಗಿದೆ ಎಂದ ಅವರು, ಖೈದಿಗಳ ಬಳಿಯಿದ್ದ ಎರಡು ಮೊಬೈಲ್ ಪೋನ್ ಕೂಡ ವಶಕ್ಕೆ ಪಡೆಯಲಾಗಿದೆ ಎಂದು ತಿಳಿಸಿದರು.

ಈ ಕುರಿತು ಪರಹತಾಬಾದ್ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!