ಆರ್‌ಎಸ್‌ಎಸ್‌ ಜ್ಯೇಷ್ಟ ಪ್ರಚಾರಕ ಆರ್. ಹರಿ ನಿಧನ

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಆರ್‌ಎಸ್‌ಎಸ್‌ ಜ್ಯೇಷ್ಟ ಪ್ರಚಾರಕ ಆರ್. ಹರಿ (93) ವಿಧಿವಶರಾಗಿದ್ದಾರೆ. ಇಂದು ಬೆಳಗ್ಗೆ 7 ಗಂಟೆ ಸುಮಾರಿಗೆ ಕೊಚ್ಚಿಯ ಅಮೃತ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.

ಕೇರಳ ರಾಜ್ಯದಲ್ಲಿ ಭಾರತೀಯರ ಸರ್ವಸ್ವವನ್ನೂ ಅಳಿಸಿ ಹಾಕಲು ಕಮ್ಯುನಿಸ್ಟರು ಮುಂದಾಗಿದ್ದರು. ಈ ವೇಳೆ ಆರ್. ಹರಿ ಅವರು ಸಾವಿರಾರು ಮಂದಿಗೆ ಆದರ್ಶವನ್ನು ತುಂಬಿ ಸನಾತನ ರಾಷ್ಟ್ರೀಯತೆಯನ್ನು ಸ್ಥಾಪಿಸಿದ ಕೀರ್ತಿಗೆ ಪಾತ್ರರಾದರು.

ಟಿ.ಜೆ. ತ್ರಿಪುಣಿತ್ತೂರ ಮೂಲದ ರಂಗ ಶೆಣೈ ಮತ್ತು ಪದ್ಮಾವತಿ ದಂಪತಿಯ ಪುತ್ರರಾಗಿ ಡಿಸೆಂಬರ್ 5, 1930 ರಂದು ಆರ್‌. ಹರಿ ಜನಿಸಿದರು. ಸೇಂಟ್ ಆಲ್ಬರ್ಟ್ಸ್ ಪ್ರೌಢಶಾಲೆಯಲ್ಲಿ ಶಿಕ್ಷಣ ಪಡೆದರು ಮತ್ತು ಕೊಚ್ಚಿಯ ಮಹಾರಾಜಸ್ ಕಾಲೇಜಿನಲ್ಲಿ ಪದವಿ ಪಡೆದರು. ಪದವಿಯ ನಂತರ ಅವರು ಪೂರ್ಣ ಸಮಯದ ಸಂಘದ ಕಾರ್ಯಕರ್ತರಾದರು. ಅವರು ಕೊಚ್ಚಿಗೆ ಸಮೀಪವಿರುವ ಉತ್ತರ ಪರವೂರಿನಲ್ಲಿ ಪ್ರಚಾರಕರಾಗಿ ಕಾರ್ಯ ನಿರ್ವಹಿಸಿದರು.

ಅವರು 1983 ರಿಂದ 1993 ರವರೆಗೆ ಅವರು ಕೇರಳ ಪ್ರಾಂತ ಪ್ರಚಾರಕ, 1990 ರಲ್ಲಿ ಅಖಿಲ ಭಾರತೀಯ ಸಹ ಬೌದ್ಧಿಕ ಪ್ರಮುಖ್, 1991 ರಿಂದ 2005 ರವರೆಗೆ ಅಖಿಲ ಭಾರತೀಯ ಬೌದ್ಧಿಕ ಪ್ರಮುಖ್, ಏಷ್ಯಾ ಮತ್ತು ಆಸ್ಟ್ರೇಲಿಯದಲ್ಲಿ ಹಿಂದೂ ಸ್ವಯಂಸೇವಕ ಸಂಘದ ಸಂಪರ್ಕ್ ಕಾರ್ಯಕರ್ತರು, 1905 ರಿಂದ 1994 ರಿಂದ ಆಸ್ಟ್ರೇಲಿಯಾ ಮತ್ತು ಅಖಿಲ ಭಾರತೀಯ ಕಾರ್ಯಕರ್ತ ಎಂಬ ಬಿರುದುಗಳನ್ನು ಹೊಂದಿದ್ದರು. 2005 ರಿಂದ 2006 ರವರೆಗೆ ಮಂಡಲದ ಸದಸ್ಯರಾಗಿ ಕಾರ್ಯ ನಿರ್ವಹಿಸಿದರು.

ಹರಿ ಅವರು ಸಂಸ್ಕೃತ, ಕೊಂಕಿಣಿ, ಮಲಯಾಳಂ, ಹಿಂದಿ, ಮರಾಠಿ, ತಮಿಳು ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಸುಮಾರು ಐವತ್ತು ಪುಸ್ತಕಗಳನ್ನು ರಚಿಸಿದ್ದಾರೆ. ಅವರ ಕೊನೆಯ ಕೃತಿ ಪೃಥ್ವಿ ಸೂಕ್ತ: ಆನ್ ಓಡ್ ಟು ಮದರ್ ಅರ್ಥ್ ಎಂಬ ಪುಸ್ತಕವನ್ನು ಇತ್ತೀಚೆಗೆ ಸರಸಂಘ ಚಾಲಕ ಡಾ ಮೋಹನ್ ಜಿ ಭಾಗವತ್ ಬಿಡುಗಡೆ ಮಾಡಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!