ಹೊಸದಿಗಂತ ಡಿಜಿಟಲ್ ಡೆಸ್ಕ್:
ಉತ್ತರಪ್ರದೇಶದ ದೇವಸ್ಥಾನವೊಂದರಲ್ಲಿ ಲಡ್ಡು ಪ್ರಸಾದಕ್ಕಾಗಿ ಭಕ್ತರು ಮುಗಿಬಿದ್ದಿದ್ದು, 20 ಜನರಿಗೆ ಗಾಯವಾಗಿದೆ.
ಬರ್ಸಾನಾದ ರಾಧಾ ರಾಣಿ ದೇವಸ್ಥಾನದಲ್ಲಿ ಹೋಳಿ ಪೂರ್ವ ಕಾರ್ಯಕ್ರಮ ನಡೆದಿತ್ತು. ಪೂಜೆಯಲ್ಲಿ ನೂರಾರು ಮಂದಿ ಭಾಗಿಯಾಗಿದ್ದು, ಕಾಲ್ತುಳಿತ ಉಂಟಾಗಿತ್ತು
ಕಡೆಯಲ್ಲಿ ಪ್ರಸಾದವಾಗಿ ಲಾಡು ವಿತರಣೆ ಮಾಡಿದ್ದು, ಈ ವೇಳೆ ಜನರು ಒಟ್ಟಿಗೇ ನುಗ್ಗಿದ್ದಾರೆ. ಆ ವೇಳೆ ರೇಲಿಂಗ್ನಲ್ಲಿ ತೂಕ ಹೆಚ್ಚಾಗಿ ಕುಸಿದು ಬಿದ್ದಿದ್ದು, ಜನ ನೆಲಕ್ಕೆ ಬಿದ್ದಿದ್ದಾರೆ. ಹೆಚ್ಚಿನವರು ಮೂಳೆ ಮುರಿತಕ್ಕೆ ಒಳಗಾಗಿದ್ದಾರೆ.