ಟೀಮ್ ನಿಂದ ಋತುರಾಜ್ ಗಾಯಕ್ವಾಡ್ ಔಟ್: ಹೊಸ ಆಟಗಾರನ ಎಂಟ್ರಿಗೆ ಚೆನ್ನೈ ಪ್ಲಾನ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಐಪಿಎಲ್ ನ ಸ್ಟ್ರಾಂಗ್ ಟೀಮ್ ಎಂದು ಕರೆಸಿಕೊಳ್ಳುವ ಚೆನ್ನೈ ಸೂಪರ್ ಕಿಂಗ್ಸ್, ಈ ಬಾರಿ ಏನೋ ಮಂಕಾಗಿದ್ದು, ಸೋಲಿನ ಮೇಲೆ ಸೋಲು ಅನುಭವಿಸುತ್ತಿದೆ.

ಇದರ ನಡುವೆ ಋತುರಾಜ್ ಗಾಯಕ್ವಾಡ್ ಗಾಯಗೊಂಡು ಐಪಿಎಲ್-2025 ಟೂರ್ನಿಯಿಂದಲೇ ಔಟ್ ಆಗಿದ್ದಾರೆ. ಹಾಗಾಗಿ ಸಿಎಸ್​​ಕೆ ಫ್ರಾಂಚೈಸಿಯು ಗಾಯಕ್ವಾಡ್ ಬದಲಿಗೆ ಹೊಸ ಆಟಗಾರನ ಹುಡುಕಾಟದಲ್ಲಿದೆ.

ಮಾಹಿತಿ ಪ್ರಕಾರ, ಟೀಂ ಇಂಡಿಯಾದ ಒಂದು ಕಾಲದ ಸ್ಫೋಟಕ ಬ್ಯಾಟ್ಸಮನ್ ಪೃಥ್ವಿ ಶಾ ಅವರನ್ನು ಕರೆದುಕೊಳ್ಳಲು ನಿರ್ಧರಿಸಿದೆ ಎನ್ನಲಾಗಿದೆ. ಆದರೆ ಈ ಬಗ್ಗೆ ಇನ್ನೂ ಸ್ಪಷ್ಟ ಮಾಹಿತಿ ಸಿಕ್ಕಿಲ್ಲ. ಸಿಎಸ್​​ಕೆಯಲ್ಲಿ ರಚಿನ್ ರವೀಂದ್ರ ಹಾಗೂ ಕಾನ್ವೆ ಆರಂಭಿಕ ಬ್ಯಾಟರ್​​ ಆಗಿದ್ದಾರೆ. ಇಬ್ಬರೂ ಪವರ್​ ಪ್ಲೇನಲ್ಲಿ ರನ್​ ಗಳಿಸಲು ಪರದಾಡುತ್ತಿದ್ದಾರೆ. ಹೀಗಾಗಿ ಪವರ್​ ಪ್ಲೇ ಸ್ಪೆಷಲಿಸ್ಟ್ ಆಗಿರುವ ಪೃಥ್ವಿ ಶಾರನ್ನು ತಂಡಕ್ಕೆ ಸೇರಿಸಿಕೊಂಡು, ಸ್ಟ್ರಾಂಗ್ ಕಂಬ್ಯಾಕ್ ಮಾಡಲು ಚೆನ್ನೈ ಸೂಪರ್ ಕಿಂಕ್ಸ್​ ಪ್ಲಾನ್​ ಮಾಡಿದೆ ಎಂದು ವರದಿಯಾಗಿದೆ.

ಪೃಥ್ವಿ ಶಾ ಈ ಬಾರಿಯ ಮೆಗಾ ಹರಾಜಿನಲ್ಲಿ ಅನ್​ಸೋಲ್ಡ್ ಆಗಿದ್ದಾರೆ. ಡೆಲ್ಲಿ ಕ್ಯಾಪಿಟಲ್ಸ್​ ಪರ 7 ಸೀಸನ್ ಆಡಿವ ಪೃಥ್ವಿ ಶಾ, 79 ಇನ್ನಿಂಗ್ಸ್​ ಆಡಿದ್ದಾರೆ. 23.94 ಸರಾಸರಿಯಲ್ಲಿ 1892 ರನ್​ಗಳಿಸಿದ್ದಾರೆ. 14 ಅರ್ಧ ಶತಕ ಇದರಲ್ಲಿ ಸೇರಿದೆ. ಇವರು ಅಗ್ರೆಸಿವ್ ಪವರ್​ಪ್ಲೇ ಸ್ಪೆಷಲಿಸ್ಟ್ ಆಗಿದ್ದಾರೆ. ಐಪಿಎಲ್​ ಕರಿಯರ್​ನಲ್ಲಿ 147.46 ಸ್ಟ್ರೈಕ್​ರೇಟ್​ನಲ್ಲಿ ಬ್ಯಾಟ್ ಬೀಸಿದ್ದಾರೆ. 2021ರ ಐಪಿಎಲ್​​ನಲ್ಲಿ ಅವರು ಸ್ಫೋಟಕ ಬ್ಯಾಟಿಂಗ್ ಆಡಿದರು. 15 ಇನ್ನಿಂಗ್ಸ್​​ನಲ್ಲಿ 31.93 ಸರಾಸರಿಯಲ್ಲಿ 479 ರನ್​ಗಳಿಸಿದ್ದರು. ಮಾತ್ರವಲ್ಲ, ನಾಲ್ಕು ಅರ್ಧಶತಕ ಕೂಡ ಬಾರಿಸಿದ್ದರು.

ಗಾಯಕ್ವಾಡ್​ ಅನುಪಸ್ಥಿತಿಯಲ್ಲಿ ಎಂಎಸ್​ ಧೋನಿ ಸಿಎಸ್​ಕೆ ತಂಡವನ್ನು ಮುನ್ನಡೆಸ್ತಿದ್ದಾರೆ.

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!