ದೇಶದ ಜನರ ಸುರಕ್ಷತೆ ನನ್ನ ಮೊದಲ ಆದ್ಯತೆ, ನಿಮ್ಮ ಒಂದೊಂದು ಮತ ಅತ್ಯಮೂಲ್ಯ: ಪ್ರಧಾನಿ ಮೋದಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ನಮ್ಮ ಸರ್ಕಾರ ದಾವಣಗೆರೆಯನ್ನು ಸ್ಮಾರ್ಟ್ ಸಿಟಿ ಎಂದು ಘೋಷಿಸಿದೆ. ದಾವಣಗೆರೆ-ಹರಿಹರ ರೈಲು ಮಾರ್ಗದಲ್ಲಿ ಆಧುನೀಕರಣ ಕಾಮಗಾರಿ ನಡೆಯುತ್ತಿದೆ. ನಮ್ಮ ಉದ್ಯೋಗಿಗಳ ಸುರಕ್ಷತೆ ನನ್ನ ಮೊದಲ ಆದ್ಯತೆಯಾಗಿದೆ. ನಿಮ್ಮ ಒಂದೊಂದು ಮತ ಮೋದಿ ಸಂಕಲ್ಪವನ್ನು ಬಲಗೊಳಿಸುತ್ತದೆ. ಭಾರತವನ್ನು ಬಲಶಾಲಿಯನ್ನಾಗಿಸುತ್ತದೆ ಎಂದು ಮೋದಿ ಹೇಳಿದ್ದಾರೆ.

ಹುಬ್ಬಳ್ಳಿಯಲ್ಲಿ ನೇಹಾ ಹತ್ಯೆ ಕುರಿತು ಮಾತನಾಡಿದ ಪ್ರಧಾನಿ ಮೋದಿ, ವಿಶ್ವವಿದ್ಯಾಲಯದ ಕ್ಯಾಂಪಸ್‌ನಲ್ಲಿ ಹಗಲು ಹೊತ್ತಿನಲ್ಲಿ ಬಾಲಕಿಯ ಹತ್ಯೆ ಮಾಡಲಾಗಿದೆ. ಈ ನಿಟ್ಟಿನಲ್ಲಿ ಕಾಂಗ್ರೆಸ್ ವೋಟಿಂಗ್ ಬ್ಯಾಂಕ್ ಕೂಡ ಸೃಷ್ಟಿಸಿಕೊಂಡಿದೆ. ನೇಹಾ ಕೊಲೆ ಸಾಮಾನ್ಯ ಪ್ರಕರಣವಲ್ಲ. ಮುಂಜಾನೆ ಮನೆಯಿಂದ ಹೊರಟವರು ವಾಪಸ್ ಬರುವ ಗ್ಯಾರಂಟಿ ಇಲ್ಲ ಎಂದು ಸರ್ಕಾರದ ವಿರುದ್ಧ ವಾಗ್ದಾಳಿ ಮಾಡಿದ್ದಾರೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!