‘ಸಲಾಂ ಆರತಿ’ ಹೆಸರು ‘ಸಂಧ್ಯಾ ಆರತಿ’ಗೆ ಬದಲಿಸಲು ಗ್ರೀನ್‌ ಸಿಗ್ನಲ್ ನೀಡಿದ ಜಿಲ್ಲಾಧಿಕಾರಿ

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಮೇಲುಕೋಟೆ ಚೆಲುವನಾರಾಯಣಸ್ವಾಮಿ ದೇವಸ್ಥಾನದಲ್ಲಿ ನಡೆಯುತ್ತಿದ್ದ ಸಲಾಂ ಆರತಿ ಹೆಸರನ್ನ ಸಂಧ್ಯಾ ಆರತಿಯೆಂದು ಬದಲಿಸಲು ಮಂಡ್ಯ ಜಿಲ್ಲಾಧಿಕಾರಿ ಎಸ್‌. ಸಶ್ವಥಿ ಅವರು ಗ್ರೀನ್ ಸಿಗ್ನಲ್ ನೀಡಿದ್ದಾರೆ.
ಮೇಲುಕೋಟೆ ಚೆಲುವನಾರಾಯಣಸ್ವಾಮಿ ದೇವಸ್ಥಾನದಲ್ಲಿ ಪ್ರತೀ ದಿನ ದೇಗುಲದಲ್ಲಿ ಟಿಪ್ಪು ಸುಲ್ತಾನ್‌ ಸಲಾಂ ಆರತಿ ನಡೆಯುತ್ತಿತ್ತು.
ಕೆಲ ಹಿಂದೂ ಸಂಘಟನೆಗಳು ಸಲಾಂ ಆರತಿಯನ್ನು ವಿರೋಧಿಸಿ, ಪೂಜೆ ಹೆಸರನ್ನ ಬದಲಾಯಿಸಲು ಒತ್ತಾಯಿಸಿದ್ದವು. ಅದರಂತೆ ದೇಗುಲ ಮಂಡಳಿ ಹೆಸರು ಬದಲಿಸಲು ಅನುಮತಿ ನೀಡುವಂತೆ ಮಂಡ್ಯ ಜಿಲ್ಲಾಧಿಕಾರಿಗೆ ಪತ್ರ ಬರೆದಿದ್ದರು. ಸಧ್ಯ ಸಲಾಂ ಆರತಿ ಹೆಸರನ್ನ ಬದಲಿಸಬಹುದು ಎಂದು ಡಿಸಿಯಿಂದ ಪತ್ರ ಬಂದಿದೆ.
ಮಂಡ್ಯ ಜಿಲ್ಲಾಧಿಕಾರಿ ಅವರು ಮುಜರಾಯಿ ಇಲಾಖೆ ಆಯುಕ್ತರಿಗೆ ಪತ್ರ ಬರೆದಿದ್ದು, ಮುಜರಾಯಿ ಇಲಾಖೆ ಆಯುಕ್ತರಿಂದ ಅಧಿಕೃತ ಆದೇಶ ಬರಬೇಕಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!