BREAKING | ರಾಜ್ಯಪಾಲರು ಧ್ವಜಾರೋಹಣದ ವೇಳೆ ಭದ್ರತಾ ಲೋಪ

ಹೊಸದಿಗಂತ, ಬೆಂಗಳೂರು: 

ಮಾಣಿಕ್ ಷಾ ಪರೇಡ್ ಮೈದಾನದಲ್ಲಿ 75ನೇ ಗಣರಾಜ್ಯೋತ್ಸವ ಆಚರಣೆ ವೇಳೆ ಅಹಿತಕರ ಘಟನೆ ನಡೆದಿದೆ. ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಮತ್ತು ಸಿಎಂ ಸಿದ್ದರಾಮಯ್ಯ ಅವರ ಎದುರು ವ್ಯಕ್ತಿಯೊಬ್ಬ ಕರಪತ್ರ ಹಿಡಿದು ವಾಗ್ದಾಳಿ ನಡೆಸಿದ ಘಟನೆ ನಡೆದಿದೆ.

ವ್ಯಕ್ತಿ ವೇದಿಕೆಯ ಮುಂದೆಯಿಂದ ಗ್ರೌಂಡ್ ಒಳಗೆ ಓಡಿ ಬಂದಿದ್ದಾನೆ. ಗ್ರೌಂಡ್ ಒಳಗೆ ಓಡಿ ಬಂದ ವ್ಯಕ್ತಿ ಸಿಎಂ ಸಿದ್ದರಾಮಯ್ಯ ಮತ್ತು ರಾಜ್ಯಪಾಲರು ಥಾವರ್​ ಚಂದ್​ ಗೆಹ್ಲೋಟ್​ ಬಳಿ ನಿಂತು ಪೋಸ್ಟರ್ ಪ್ರದರ್ಶನ ಮಾಡಿದ್ದಾನೆ. ಇದನ್ನು ಕಂಡ ಪೊಲೀಸರು ಆತನನ್ನು ಕೂಡಲೆ ಬಂಧಿಸಿದ್ದಾರೆ.

ಆ ವ್ಯಕ್ತಿ ಕಣ್ಣೀರು ಹಾಕುತ್ತಾ ಪೋಸ್ಟರ್ ತೋರಿಸಿದ್ದಾನೆ. ಬಂಧಿತ ವ್ಯಕ್ತಿಯನ್ನು ಪೊಲೀಸರು ಕಬ್ಬನ್ ಪಾರ್ಕ್ ಠಾಣೆಗೆ ಕರೆದೊಯ್ದಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!