ಹೊಸದಿಗಂತ ಡಿಜಿಟಲ್ ಡೆಸ್ಕ್
ಅತ್ಯಾಚಾರ ಕೇಸ್ನಲ್ಲಿ ಸಿಲು ಕಿಬಳಿಕ ತನ್ನದೇ ಕೈಲಾಸ ಸೃಷ್ಟಿಸಿಕೊಂಡು ಅಪಾರ ಪ್ರಮಾಣದ ಭಕ್ತರನ್ನು ತನ್ನತ್ತ ಸೆಳೆಯುತ್ತಿರುವ ಸ್ವಯಂಘೋಷಿತ ‘ದೇವಮಾನವ’ ನಿತ್ಯಾನಂದ ವಿರುದ್ಧ ಇದೀಗ ಆರೋಪ ಕೇಳಿಬಂದಿದೆ .
ಈತನಿಗೆ ಎಲ್ಲೆಡೆಶಿಷ್ಯೆಯಂದಿರು ಅಪಾರ ಪ್ರಮಾಣದಲ್ಲಿದ್ದು, ಕೈಲಾಸದಲ್ಲಿಯೂ ಹಲವಾರು ಶಿಷ್ಯೆಯರನ್ನು ಹೊಂದಿದ್ದಾನೆ ಎನ್ನಲಾಗಿದೆ.ಕೈಲಾಸದಿಂದಲೇ ಚಿತ್ರ- ವಿಚಿತ್ರ ವೇಷ ಭೂಷಣದೊಂದಿಗೆ ಸಂದೇಶವನ್ನೂ ಕಳಿಸುತ್ತಿರುವ ಈ ಸ್ವಯಂಘೋಷಿತ ‘ದೇವಮಾನವ’ನ ವಿರುದ್ಧ ಈಗ ಮತ್ತೆ ಅತ್ಯಾಚಾರದ ಆರೋಪ ಕೇಳಿಬಂದಿದೆ.ಕೈಲಾಸದಿಂದಲೇ ಈ ಆರೋಪ ಕೇಳಿಬಂದಿದೆ.
ಕೈಲಾಸದಲ್ಲಿ ಈತ ಲೈಂಗಿಕ ದೌರ್ಜನ್ಯ ನಡೆಸುತ್ತಿದ್ದೇನೆ ಎಂದು ವಿದೇಶಿ ಶಿಷ್ಯೆಯೊಬ್ಬಳು ಇಮೇಲ್ ಮೂಲಕವೇ ರಾಮನಗರದ ಬಿಡದಿ ಠಾಣೆ ಪೊಲೀಸರಿಗೆ ದೂರ ದಾಖಲು ಮಾಡಿದ್ದು, ಈ ಬಗ್ಗೆ ತನ್ನ ಟ್ವಿಟ್ಟರ್ ಖಾತೆಯಲ್ಲಿಯೂ ಬರೆದುಕೊಂಡಿದ್ದಾಳೆ.
ವಿದೇಶಿ ಶಿಷ್ಯೆ ಸಾರಾ ಲಾಂದ್ರಿ ಎಂಬಾಕೆ ಕೈಲಾಸದಲ್ಲಿ ನಿತ್ಯಾನಂದ ಹಾಗೂ ಆತನ ಶಿಷ್ಯವೃಂದದವರು ಲೈಂಗಿಕ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿದ್ದಾಳೆ.
ಇದಕ್ಕೆ ಪ್ರತಿಕ್ರಿಯೆ ನೀಡಿರುವ ಬಿಡದಿ ಪೊಲೀಸರು, ಈ ರೀತಿ ಇ-ಮೇಲ್ ದೂರನ್ನು ಪಡೆದುಕೊಳ್ಳಲು ಆಗದು. ಆದ್ದರಿಂದ ದಯವಿಟ್ಟು ಯಾವುದೇ ಭಯ, ಅಂಜಿಕೆ ಇಲ್ಲದೇ ಭಾರತದ ಯಾವುದಾದರೂ ಪೊಲೀಸ್ ಠಾಣೆಗೆ ಖುದ್ದಾಗಿ ಹೋಗಿ ದೂರು ದಾಖಲಿಸುವಂತೆ ಹೇಳಿರುವ ಪತ್ರವೂ ವೈರಲ್ ಆಗುತ್ತಿದೆ.