ಹೊಸದಿಗಂತ ಡಿಜಿಟಲ್ ಡೆಸ್ಕ್:
ಅನಂತ್ ಅಂಬಾನಿ ಹಾಗೂ ರಾಧಿಕಾ ಮರ್ಚೆಂಟ್ ಮದುವೆಯ ಕಾರ್ಯಕ್ರಮಗಳ ವೇಳೆ ಶಾರುಖ್ ಖಾನ್ ರಾಮ್ಚರಣ್ರನ್ನು ಇಡ್ಲಿ ಸಾಂಬಾರ್ ಎಂದು ಕರೆದಿದ್ದರು, ಇದರಿಂದ ಅವರ ಕುಟುಂಬಕ್ಕೆ ಬೇಜಾರಾಗಿತ್ತು ಎನ್ನುವ ಸುದ್ದಿ ಎಲ್ಲೆಡೆ ವೈರಲ್ ಆಗಿತ್ತು.
ಇದೀಗ ಈ ಇನ್ಸಿಡೆಂಟ್ಗೆ ಸ್ಪಷ್ಟನೆ ಸಿಕ್ಕಿದೆ.. ಶಾರುಖ್ ಖಾನ್ ರಾಮ್ಚರಣ್ರನ್ನು ಎಲ್ಲರೆದುರು ಇಡ್ಲಿ ಸಾಂಬಾರ್ ಎಂದು ಕೂಗಿದ್ದಾರೆ. ಇದರಿಂದ ಉಪಾಸನ ಅವರಿಗೆ ಬೇಜಾರಾಯ್ತು ಎಂದು ಅವರ ಡ್ರೈವರ್ ಹೇಳಿದ್ದಾರೆ ಎನ್ನಲಾಗಿತ್ತು.
ಆದರೆ ಶಾರುಖ್ ಖಾನ್ ತಮಾಷೆಯಿಂದ ತಮ್ಮ ಸಿನಿಮಾ ಡೈಲಾಗ್ ಒಂದನ್ನು ಹೇಳುತ್ತಾ ರಾಮ್ಚರಣ್ ಅವರನ್ನು ಸ್ಟೇಜ್ ಮೇಲೆ ಕರೆದಿದ್ದರು. ನಾಟುನಾಟು ಹಾಡಿಗೆ ನೃತ್ಯ ಮಾಡುವ ವೇಳೆ ಸ್ಟೆಪ್ಸ್ ಬಂದಿಲ್ಲ ಎಂದು ಶಾರುಖ್ ತಮಿಳ್ ಡೈಲಾಗ್ ಹೊಡೆಯುತ್ತಾ ರಾಮ್ಚರಣ್ ಅವರನ್ನು ಕೂಗಿದ್ದಾರೆ.