September 18, 2026
Friday, September 18, 2026
spot_img

ನವ ಭಾರತದ ಶಕ್ತಿ ಕೇಂದ್ರ: ಇಂದು ಪ್ರಧಾನಿ ಮೋದಿಯಿಂದ ‘ಸೇವಾ ತೀರ್ಥ’ ಲೋಕಾರ್ಪಣೆ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಸ್ವತಂತ್ರ ಭಾರತದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಪ್ರಧಾನ ಮಂತ್ರಿಗಳ ಕಚೇರಿ ಸ್ಥಳಾಂತರಗೊಳ್ಳಲು ಸಿದ್ಧವಾಗಿದೆ. ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ‘ಸೆಂಟ್ರಲ್ ವಿಸ್ಟಾ’ ಪುನರ್ವಿಭಜನಾ ಯೋಜನೆಯ ಭಾಗವಾಗಿ ನಿರ್ಮಿಸಲಾದ ಭವ್ಯ ‘ಸೇವಾ ತೀರ್ಥ’ ಸಂಕೀರ್ಣವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಅಧಿಕೃತವಾಗಿ ಉದ್ಘಾಟಿಸಲಿದ್ದಾರೆ.

ಮಧ್ಯಾಹ್ನ 1:30ಕ್ಕೆ ‘ಸೇವಾ ತೀರ್ಥ’ ಹೆಸರನ್ನು ಪ್ರಧಾನಿಗಳು ಅನಾವರಣಗೊಳಿಸಲಿದ್ದಾರೆ. ಸಂಜೆ 6 ಗಂಟೆಗೆ ಉದ್ಘಾಟನಾ ಸಮಾರಂಭ ನಡೆಯಲಿದ್ದು, ಬಳಿಕ ಸಾರ್ವಜನಿಕರನ್ನು ಉದ್ದೇಶಿಸಿ ಪ್ರಧಾನಿ ಮಾತನಾಡಲಿದ್ದಾರೆ.

ಈ ಸಂಕೀರ್ಣವು ಪ್ರಧಾನಿ ಕಚೇರಿ ಮಾತ್ರವಲ್ಲದೆ, ಕರ್ತವ್ಯ ಭವನ-1 ಮತ್ತು 2, ಕ್ಯಾಬಿನೆಟ್ ಸಚಿವಾಲಯ ಹಾಗೂ ರಾಷ್ಟ್ರೀಯ ಭದ್ರತಾ ಮಂಡಳಿ ಸಚಿವಾಲಯಗಳನ್ನು ಒಳಗೊಂಡಿರಲಿದೆ.

ಈ ನೂತನ ಸಂಕೀರ್ಣಕ್ಕೆ ‘ಸೇವೆ’ಯನ್ನೇ ಮೂಲ ಮಂತ್ರವನ್ನಾಗಿಸಿಕೊಂಡು ಹೆಸರಿಡಲಾಗಿದೆ:

ಸೇವಾ ತೀರ್ಥ – 1: ಪ್ರಧಾನ ಮಂತ್ರಿಗಳ ನೂತನ ಕಚೇರಿ. ಇದು ಅತ್ಯಾಧುನಿಕ ಕಾರ್ಯಕ್ಷೇತ್ರಗಳು ಮತ್ತು ಭವ್ಯ ಸಮಾರಂಭದ ಕೊಠಡಿಗಳನ್ನು ಹೊಂದಿದೆ.

ಸೇವಾ ತೀರ್ಥ – 2: ಕ್ಯಾಬಿನೆಟ್ ಸಚಿವಾಲಯದ ಕಚೇರಿ.

ಸೇವಾ ತೀರ್ಥ – 3: ರಾಷ್ಟ್ರೀಯ ಭದ್ರತಾ ಸಲಹೆಗಾರರ ಕಚೇರಿ.

1947ರ ನಂತರ ಪ್ರಧಾನಿ ಕಚೇರಿಯನ್ನು ಹೊಸ ಕಟ್ಟಡಕ್ಕೆ ಸ್ಥಳಾಂತರಿಸುತ್ತಿರುವುದು ಇದೇ ಮೊದಲು. ಈವರೆಗೆ ವಿವಿಧೆಡೆ ಹಂಚಿಹೋಗಿದ್ದ ಪ್ರಮುಖ ಆಡಳಿತಾತ್ಮಕ ಕಚೇರಿಗಳು ಇನ್ನು ಮುಂದೆ ಒಂದೇ ಸಂಕೀರ್ಣದಲ್ಲಿ ಕಾರ್ಯನಿರ್ವಹಿಸಲಿವೆ, ಇದು ಆಡಳಿತದಲ್ಲಿ ಹೆಚ್ಚಿನ ವೇಗ ಮತ್ತು ಸಮನ್ವಯಕ್ಕೆ ನಾಂದಿ ಹಾಡಲಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !