ನಿಮ್ಮ ಪ್ರದರ್ಶನದಿಂದ ಶೇನ್​ ವಾರ್ನ್ ಸಂತಸಗೊಂಡಿದ್ದಾರೆ, ಫೈನಲ್​​​ಗೆ ಶುಭವಾಗಲಿ: ರಾಜಸ್ಥಾನಕ್ಕೆ ಶುಭಹಾರೈಸಿದ ಆರ್​ಸಿಬಿ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಐಪಿಎಲ್ ಕ್ವಾಲಿಫೈಯರ್​ 2 ಪಂದ್ಯದಲ್ಲಿರಾಯಲ್​ ಚಾಲೆಂಜರ್ಸ್ ಬೆಂಗಳೂರು ತಂಡ ಸೋಲು ಕಾಣುವ ಮೂಲಕ ಟೂರ್ನಿಯಿಂದ ಹೊರ ಬಿದ್ದಿದೆ. ರಾಜಸ್ಥಾನ ರಾಯಲ್ಸ್​ ಫೈನಲ್​ಗೆ ಲಗ್ಗೆ ಹಾಕಿದೆ. ಇದೀಗ ಗುಜರಾತ್​ ವಿರುದ್ಧ ಪ್ರಶಸ್ತಿಗಾಗಿ ಹೋರಾಟ ನಡೆಸಲಿದೆ.
ಫೈನಲ್ ನ ಸನಿಹ ಬಂದು ಸೋತ ಬೆಂಗಳೂರು ತಂಡ ಟ್ವೀಟ್​ ಮಾಡಿದ್ದೂ, ಎಲ್ಲರ ಮನಗೆದ್ದಿದೆ.
ಆರ್​ಸಿಬಿ ಟ್ವೀಟ್ ​:
ನಿಮ್ಮ ಪ್ರದರ್ಶನದಿಂದ ಶೇನ್​ ವಾರ್ನ್ ಸಂತಸಗೊಂಡಿದ್ದಾರೆ. ಇಂದು ರಾತ್ರಿ ಚೆನ್ನಾಗಿ ಆಡಿದ್ದೀರಿ. ಫೈನಲ್​ ಪಂದ್ಯಕ್ಕೆ ನಿಮಗೆ ಶುಭವಾಗಲಿ; ಎಂದು ಟ್ವೀಟ್ ಮಾಡಿದೆ.
ರಾಜಸ್ಥಾನ ರಾಯಲ್ಸ್​ ವಿರುದ್ಧ ಸೋತ ಬೆನ್ನಲ್ಲೇ ಬೆಂಗಳೂರು ಟ್ವೀಟ್ ಮಾಡಿದೆ. ಅದಕ್ಕೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಬೆಂಗಳೂರು ತಂಡದ ಟ್ವೀಟ್​ಗೆ ರಾಜಸ್ಥಾನ ರಾಯಲ್ಸ್ ಕೂಡ ಪ್ರತಿಕ್ರಿಯೆ ನೀಡಿದ್ದು, ಹೃದಯದ ಎಮೋಜಿ ಹಾಕಿಕೊಂಡಿದೆ.

ಈ ಹಿಂದೆ ರಾಜಸ್ಥಾನ ರಾಯಲ್ಸ್ ತಂಡದ ಕ್ಯಾಪ್ಟನ್ ಆಗಿದ್ದ ಶೇನ್​ ವಾರ್ನ್ ತಂಡವನ್ನ ಚಾಂಪಿಯನ್​​​​​ ಪಟ್ಟಕ್ಕೇರಿಸುವಲ್ಲಿ ಯಶಸ್ವಿಯಾಗಿದ್ದರು. ಕಳೆದ ಕೆಲ ದಿನಗಳ ಹಿಂದೆ ಹೃದಯಾಘಾತದಿಂದ ಅವರು ಸಾವನ್ನಪ್ಪಿದ್ದರು. ಇದರ ಬೆನ್ನಲ್ಲೇ ರಾಜಸ್ಥಾನ ರಾಯಲ್ಸ್​​ ಶೇನ್​ ವಾರ್ನ್​​ಗೋಸ್ಕರ ಕಪ್​ ಗೆಲ್ಲುತ್ತೇವೆ ಎಂದು ಹೇಳಿಕೊಂಡಿತ್ತು.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!