ಹೊಸದಿಗಂತ ಡಿಜಿಟಲ್ ಡೆಸ್ಕ್:
ಐಪಿಎಲ್ ಕ್ವಾಲಿಫೈಯರ್ 2 ಪಂದ್ಯದಲ್ಲಿರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಸೋಲು ಕಾಣುವ ಮೂಲಕ ಟೂರ್ನಿಯಿಂದ ಹೊರ ಬಿದ್ದಿದೆ. ರಾಜಸ್ಥಾನ ರಾಯಲ್ಸ್ ಫೈನಲ್ಗೆ ಲಗ್ಗೆ ಹಾಕಿದೆ. ಇದೀಗ ಗುಜರಾತ್ ವಿರುದ್ಧ ಪ್ರಶಸ್ತಿಗಾಗಿ ಹೋರಾಟ ನಡೆಸಲಿದೆ.
ಫೈನಲ್ ನ ಸನಿಹ ಬಂದು ಸೋತ ಬೆಂಗಳೂರು ತಂಡ ಟ್ವೀಟ್ ಮಾಡಿದ್ದೂ, ಎಲ್ಲರ ಮನಗೆದ್ದಿದೆ.
ಆರ್ಸಿಬಿ ಟ್ವೀಟ್ :
ನಿಮ್ಮ ಪ್ರದರ್ಶನದಿಂದ ಶೇನ್ ವಾರ್ನ್ ಸಂತಸಗೊಂಡಿದ್ದಾರೆ. ಇಂದು ರಾತ್ರಿ ಚೆನ್ನಾಗಿ ಆಡಿದ್ದೀರಿ. ಫೈನಲ್ ಪಂದ್ಯಕ್ಕೆ ನಿಮಗೆ ಶುಭವಾಗಲಿ; ಎಂದು ಟ್ವೀಟ್ ಮಾಡಿದೆ.
ರಾಜಸ್ಥಾನ ರಾಯಲ್ಸ್ ವಿರುದ್ಧ ಸೋತ ಬೆನ್ನಲ್ಲೇ ಬೆಂಗಳೂರು ಟ್ವೀಟ್ ಮಾಡಿದೆ. ಅದಕ್ಕೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಬೆಂಗಳೂರು ತಂಡದ ಟ್ವೀಟ್ಗೆ ರಾಜಸ್ಥಾನ ರಾಯಲ್ಸ್ ಕೂಡ ಪ್ರತಿಕ್ರಿಯೆ ನೀಡಿದ್ದು, ಹೃದಯದ ಎಮೋಜಿ ಹಾಕಿಕೊಂಡಿದೆ.
ಈ ಹಿಂದೆ ರಾಜಸ್ಥಾನ ರಾಯಲ್ಸ್ ತಂಡದ ಕ್ಯಾಪ್ಟನ್ ಆಗಿದ್ದ ಶೇನ್ ವಾರ್ನ್ ತಂಡವನ್ನ ಚಾಂಪಿಯನ್ ಪಟ್ಟಕ್ಕೇರಿಸುವಲ್ಲಿ ಯಶಸ್ವಿಯಾಗಿದ್ದರು. ಕಳೆದ ಕೆಲ ದಿನಗಳ ಹಿಂದೆ ಹೃದಯಾಘಾತದಿಂದ ಅವರು ಸಾವನ್ನಪ್ಪಿದ್ದರು. ಇದರ ಬೆನ್ನಲ್ಲೇ ರಾಜಸ್ಥಾನ ರಾಯಲ್ಸ್ ಶೇನ್ ವಾರ್ನ್ಗೋಸ್ಕರ ಕಪ್ ಗೆಲ್ಲುತ್ತೇವೆ ಎಂದು ಹೇಳಿಕೊಂಡಿತ್ತು.