ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೊನೆಗೂ ಎನ್ ಸಿಪಿ ಮುಖ್ಯಸ್ಥ ಶರದ್ ಪವಾರ್ ಬಣಕ್ಕೆ ಪಕ್ಷದ ಹೆಸರು ಮತ್ತು ಚಿಹ್ನೆಯ ಗೊಂದಲಕ್ಕೆ ತೆರೆಬಿದ್ದಿದ್ದು, ಸುಪ್ರೀಂ ಕೋರ್ಟ್ ಲೋಕಸಭೆ ಮತ್ತು ವಿಧಾನಸಭೆ ಚುನಾವಣೆಗೆ ಶರದ್ ಪವಾರ್ ಬಣಕ್ಕೆ ಪಕ್ಷದ ಹೆಸರನ್ನು ‘ನ್ಯಾಷನಲಿಸ್ಟ್ ಕಾಂಗ್ರೆಸ್ ಪಾರ್ಟಿ-ಶರದ್ಚಂದ್ರ ಪವಾರ್’ ಬಳಸಲು ಅನುಮತಿ ನೀಡಿದೆ.
ಜೊತೆಗೆ ಶರದ್ ಪವಾರ್ ಬಣಕ್ಕೆ ಚುನಾವಣೆಗೆ ‘ಕಹಳೆ ಊದುವ ವ್ಯಕ್ತಿ’ಯ ಗುರುತನ್ನು ಚಿಹ್ನೆಯಾಗಿ ಬಳಸಲು ಅನುಮತಿ ನೀಡಿದೆ.
ಇದರ ಜೊತೆಗೆ ಈ ಚಿಹ್ನೆಯನ್ನು ಇತರರು ಬಳಸದಂತೆ ಚುನಾವಣಾ ಆಯೋಗ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದೆ. ಅಂತೆಯೇ ಎನ್ಸಿಪಿ ಅಜಿತ್ ಪವಾರ್ ಬಣ ‘ಗಡಿಯಾರ’ ಚಿಹ್ನೆಯ ಕುರಿತು ಸಾರ್ವಜನಿಕ ನೋಟಿಸ್ ನೀಡುವಂತೆ ಕೇಳಿದೆ.