ಹೊಸದಿಗಂತ ಡಿಜಿಟಲ್ ಡೆಸ್ಕ್:
ಒಡಿಶಾದ ಜಮನಕಿರಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕ್ಷುಲ್ಲಕ ಕಾರಣಕ್ಕೆ ಪತಿಯೊಬ್ಬ ಪತ್ನಿಯನ್ನು ಹತ್ಯೆಗೈದಿದ್ದಾನೆ.
ಒಡಿಶಾದ ಸಂಬಲ್ಪುರದಲ್ಲಿ ಪತ್ನಿ ಸಾಂಬಾರ್ ಮಾಡಿದ್ದಾಳೆ ಆದರೆ ಅನ್ನ ಮಾಡಿಲ್ಲ ಎಂದು ಸಿಟ್ಟಾದ ಪತಿ ಆಕೆಯನ್ನು ಕೊಂದಿದ್ದಾನೆ. ಸನಾತನ ಧಾರುವಾ ತನ್ನ ಪತ್ನಿ ಪುಷ್ಪಾ ಧರುವಾರನ್ನು ಭೀಕರವಾಗಿ ಕೊಲೆ ಮಾಡಿದ್ದಾನೆ.
ದಂಪತಿಗೆ ಮಗ ಹಾಗೂ ಮಗಳಿದ್ದು, ಮನೆಯಲ್ಲಿ ಗಂಡ ಹೆಂಡತಿ ಇಬ್ಬರೇ ಇರುವ ವೇಳೆ ಈ ಘಟನೆ ನಡೆದಿದೆ. ಮನೆಗೆ ಮಕ್ಕಳು ಬಂದ ನಂತರ ತಾಯಿಯ ಹತ್ಯೆಯಾಗಿರುವುದನ್ನು ಕಂಡು ಭಯಬಿದ್ದು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಆರೋಪಿಯನ್ನು ವಶಕ್ಕೆ ಪಡೆಯಲಾಗಿದೆ.