ಹೊಸದಿಗಂತ ಡಿಜಿಟಲ್ ಡೆಸ್ಕ್:
ಸದ್ದಿಲ್ಲದೇ ರಿಷಭ್ ಶೆಟ್ಟಿ ಮಾಡಿದ್ದ ಕಾಂತಾರ ಸಿನಿಮಾ ವಿಶ್ವದೆಲ್ಲೆಡೆ ಸದ್ದು ಮಾಡಿತ್ತು. ಕನ್ನಡ ಸಿನಿಮಾಗಳನ್ನು ನೋಡವರು ಕನ್ನಡ ಇಂಡಸ್ಟ್ರಿಯನ್ನು ಹಾಡಿ ಹೊಗಳುವಂತೆ ಮಾಡಿತ್ತು.
ಕಾಂತಾರ ರಿಲೀಸ್ ನಂತರ ರಿಷಭ್ ಲಕ್ ಬದಲಾಗಿದೆ. ಸಾಕಷ್ಟು ಸಿನಿಮಾ ಆಫರ್ಗಳು ರಿಷಭ್ ಕೈಯಲ್ಲಿವೆ. ಇದರಲ್ಲಿ ಬಾಲಿವುಡ್ ಖ್ಯಾತ ನಿರ್ದೇಶಕರಾದ ಅಶುತೋಷ್ ಗೋವರೀಕರ್ ಸಿನಿಮಾ ಕೂಡ ಒಂದು.
ಲಗಾನ್ ಸಿನಿಮಾ ನಿರ್ದೇಶಿಸಿ ಇತಿಹಾಸ ಸೃಷ್ಟಿಸಿದ್ದ ಗೋವರೀಕರ್ ರಿಷಭ್ ಜೊತೆ ಸಿನಿಮಾ ಮಾಡೋದಕ್ಕೆ ಎಕ್ಸೈಟ್ ಆಗಿದ್ದಾರೆ. ಇದಕ್ಕಾಗಿ ರಿಷಭ್ ಮುಂಬೈಗೆ ಹೋಗಿ ಬಂದಿದ್ದೂ ಆಗಿದೆ. ಈಗಾಗಲೇ ಸಾಕಷ್ಟು ಭೇಟಿಗಳು ಮುಗಿದಿದ್ದು, ಸಿನಿಮಾ ಅನೌನ್ಸ್ಮೆಂಟ್ ಮಾತ್ರ ಬಾಕಿ ಇದೆ.
ಕಾಂತಾರ ಪ್ರೀಕ್ವೆಲ್ ನಂತರ ಹೊಸ ಸಿನಿಮಾ ಸೆಟ್ಟೇರಲಿದೆ ಎನ್ನಲಾಗಿದೆ.