ಹೊಸದಿಗಂತ ಡಿಜಿಟಲ್ ಡೆಸ್ಕ್:
ಲೋಕಸಭೆ ಚುನಾವಣೆಗೆ ಇನ್ನೇನು ಸ್ವಲ್ಪವೇ ಸಮಯ ಬಾಕಿ ಇದೆ ಎನ್ನುವಾಗ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಮತ್ತೆ ಬಿಜೆಪಿ ಮಡಿಲು ಸೇರಿದ್ದಾರೆ.
ಈ ವಿಚಾರ ರಾಜಕೀಯ ವಲಯದಲ್ಲಿ ಭಾರೀ ಚರ್ಚೆಯಾಗುತ್ತಿದ್ದು, ಸಿಎಂ ಸಿದ್ದರಾಮಯ್ಯ ರಿಯಾಕ್ಟ್ ಮಾಡಿದ್ದು ಹೀಗೆ..
ಬಿಜೆಪಿಯಲ್ಲಿ ನನಗೆ ಅವಮಾನ ಆಗಿದೆ ನಾನು ಅಲ್ಲಿಗೆ ಹೋಗೋದಿಲ್ಲ ಎಂದಿದ್ರು. ನಾವು ಟಿಕೆಟ್ ಕೂಡ ಕೊಟ್ಟಿದ್ದೆವು, ಸೋತರೂ ಎಂಎಲ್ಸಿ ಮಾಡಿದ್ದೆವು. ಒಟ್ಟಾರೆ ನಮ್ಮ ಪಕ್ಷದಲ್ಲಿ ಅವರಿಗೆ ಏನೂ ಅನ್ಯಾಯ ಆಗಿಲ್ಲ ಎಂದಿದ್ದಾರೆ.