ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ತವರು ಪಕ್ಷ ಬಿಜೆಪಿ ವಾಪಾಸಾಗಿದ್ದಾರೆ.
ಇದೀಗ ಬಿಜೆಪಿಯಿಂದ ಕಾಂಗ್ರೆಸ್ಗೆ ಹೋಗಿರುವುದರಲ್ಲಿ ಲಕ್ಷ್ಮಣ ಸವದಿ ವಾಪಾಸ್ ಬಿಜೆಪಿಗೆ ಬರೋದು ಬಾಕಿ ಇದೆ. ಈ ಕಾರಣದಿಂದಾಗಿ ಸವದಿ ಬಿಜೆಪಿಗೆ ವಾಪಾಸ್ ಆಗ್ತಾರಾ ಇಲ್ಲವಾ ಎನ್ನುವ ಚರ್ಚೆ ನಡೆಯುತ್ತಿದೆ.
ಈ ಬೆನ್ನಲ್ಲೇ ಡಿಸಿಎಂ ಡಿ.ಕೆ. ಶಿವಕುಮಾರ್ ಲಕ್ಷ್ಮಣ ಸವದಿ ಅವರನ್ನು ಭೇಟಿ ಮಾಡಿದ್ದಾರೆ. ಈಗಾಗಲೇ ಸವದಿ ನಾನು ಬಿಜೆಪಿಗೆ ಹೋಗೋದಿಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದಾರೆ. ಆದರೆ ಬಿಜೆಪಿಯಿಂದ ಸವದಿಗೆ ಕರೆ ಬರುತ್ತಿದೆ, ಶೆಟ್ಟರ್ ರೀತಿ ಸದ್ದಿಲ್ಲದೇ ಬಿಜೆಪಿಗೆ ಸವದಿ ವಾಪಾಸಾಗ್ತಾರಾ ಅನ್ನೋ ಭಯ ಕಾಂಗ್ರೆಸ್ಗೆ ಕಾಡಿದಂತಿದೆ.
ಅದಕ್ಕಾಗಿಯೇ ಪಕ್ಕಾ ಮಾಡಿಕೊಳ್ಳಲು ಮಾತುಕತೆ ನಡೆದಿದ್ದು, ಸವದಿ ಕಾಂಗ್ರೆಸ್ ಬಿಡೋದಿಲ್ಲ ಎಂದು ಹೇಳಿದ್ದಾರೆ. ಇನ್ನು ಶೆಟ್ಟರ್ ಬಿಜೆಪಿ ಸೇರ್ಪಡೆ ಬಗ್ಗೆ ಡಿಕೆಶಿ ಮಾತನಾಡಿದ್ದು, ನಮಗ್ಯಾರಿಗೂ ಈ ಬಗ್ಗೆ ಸುಳಿವೂ ಇರಲಿಲ್ಲ. ಜನ ತಿರಸ್ಕರಿಸಿದ ಶೆಟ್ಟರ್ಗೆ ಗೌರವ ಕೊಟ್ಟು ಎಂಎಲ್ಸಿ ಮಾಡಿದ್ದೇವೆ. ಇಷ್ಟೆಲ್ಲಾ ಆದಮೇಲೂ ಬಿಜೆಪಿಗೆ ಹೋಗಿದ್ದು ಅವರ ಆತ್ಮಸಾಕ್ಷಿಗೆ ಬಿಟ್ಟ ವಿಚಾರ ಎಂದಿದ್ದಾರೆ.