ಹೊಸದಿಗಂತ ವರದಿ ಕಲಬುರಗಿ
ಆಳಂದ ಪಟ್ಟಣದ ಲಾಡ್ಲೆ ಮಶಾಕ್ ದಗಾ೯ದಲ್ಲಿನ ಶಿವಲಿಂಗ ಪೂಜೆ ಹಿನ್ನೆಲೆಯಲ್ಲಿ ಆಳಂದ ಪಟ್ಟಣ ಬಂದ್ ಆಗಿ,ಇಡೀ ಪಟ್ಟಣದ ರಸ್ತೆಗಳು ಬಸ್ ಸಂಚಾರ ಇಲ್ಲದೆ ಬಿಕೋ ಎನ್ನುತ್ತಿದ್ದು, ಪ್ರಯಾಣಿಕರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.
ಪಟ್ಟಣದ ಪ್ರಮುಖ ರಸ್ತೆಗಳಾದ ಶ್ರೀರಾಮ ಮಾಕೇ೯ಟ್,ಬಸ್ ನಿಲ್ದಾಣದ ಎದುರಿನ ರಸ್ತೆ, ತಹಶೀಲ್ದಾರ್ ಕಛೇರಿ ಮುಂಭಾಗ ಹಾದು ಹೋಗುವ ಎಲ್ಲಾ ರಸ್ತೆಗಳು ಬಿಕೋ ಎನ್ನುತ್ತಿವೆ.
ದೂರದ ಮಹಾರಾಷ್ಟ್ರ ಕ್ಕೆ ಹೋಗಬೇಕು.ಬೆಳಿಗ್ಗೆಯಿಂದ ಬಸ್ ಸಲುವಾಗಿ ಕಾಯುತ್ತಾ ಕುಳಿತಿದ್ದೇವೆ.ಪೋಲಿಸರು ನಮ್ಮನ್ನು ಕಳ್ಳರಂತೆ ಬಸ್ ನಿಲ್ದಾಣದಿಂದ ಹೊರಗೆ ಓಡಿಸುತ್ತಿದ್ದಾರೆ.ನಾವು ಹಳ್ಳಿಯಿಂದ ಬಂದಿದ್ದೇವೆ.ಬಸ್ ಸೇರಿದಂತೆ ಏನೂ ಸಿಗುತ್ತಿಲ್ಲ. ನಿಲ್ದಾಣದಲ್ಲಿ ಕೂಡಲು ಸಹ ಬಿಡುತ್ತಿಲ್ಲ ಎಂದು ಮಹಿಳೆಯೊಬ್ಬರು ದೂರಿದರು.
ಶಿವರಾತ್ರಿ ಹಬ್ಬದ ಹಿನ್ನೆಲೆಯಲ್ಲಿ ಹಣ್ಣು , ಹೂವು, ತರಕಾರಿ ಖರೀದಿ ಮಾಡಲು ಬಂದಿದ್ದು,ಯಾವುದು ಸಿಗುತ್ತಿಲ್ಲ.ಜನರಗಿಂತ ಪೋಲಿಸರೇ ಹೆಚ್ಚು ಜನ ಕಾಣುತ್ತಿದ್ದಾರೆ ಎಂದು ಇನ್ನೋರ್ವ ಮಹಿಳೆ ತನ್ನ ನೋವನ್ನು ತೋಡಿಕೊಂಡರು.