ಭಾರತ್ ಜೋಡೋ ಯಾತ್ರೆಗೆ ಶಿವಸೇನೆ ಬೆಂಬಲ: ಜಮ್ಮುವಿನಲ್ಲಿ ಸಾಥ್ ನೀಡಲಿದ್ದಾರೆ ನಾಯಕರು!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಭಾರತ್ ಜೋಡೋ ಯಾತ್ರೆಗೆ ಶಿವಸೇನೆ ಬೆಂಬಲ ಘೋಷಿಸಿದೆ.
ಹೀಗಾಗಿ ಮುಂದಿನ ವಾರ ಜಮ್ಮು-ಕಾಶ್ಮೀರದಲ್ಲಿ ನಡೆಯಲಿರುವ ಯಾತ್ರೆಯಲ್ಲಿ ಅಲ್ಲಿನ ಸ್ಥಳೀಯ ನಾಯಕರು ಭಾಗಿಯಾಗಲಿದ್ದಾರೆ ಎಂದು ಪಕ್ಷ ಘೋಷಿಸಿದೆ.

ಶಿವಸೇನೆ ನಾಯಕ ಮನೀಷ್ ಸಹ್ನಿ ಭಾರತ್ ಜೋಡೋ ನಡಿಗೆಯಲ್ಲಿ ಜಮ್ಮು -ಕಾಶ್ಮೀರದಲ್ಲಿ ಶಿವಸೇನೆ ಭಾಗವಹಿಸಲಿದೆ ಎಂದು ಹೇಳಿದ್ದಾರೆ.
ಮನೀಷ್ ಸಹ್ನಿ ಜಮ್ಮು-ಕಾಶ್ಮೀರದ ಶಿವಸೇನೆ (ಉದ್ಧವ್ ಬಣ) ಅಧ್ಯಕ್ಷರಾಗಿದ್ದು, ಧರ್ಮ ಹಾಗೂ ದ್ವೇಷವನ್ನೇ ಬಂಡವಾಳವಾಗಿಟ್ಟುಕೊಂಡು ರಾಜಕಾರಣ ನಡೆಸುತ್ತಿರುವವರಿಗೆ ರಾಹುಲ್ ಗಾಂಧಿ ಭಾರತ್ ಜೋಡೋ ಮೂಲಕ ತಕ್ಕ ಉತ್ತರ ನೀಡುತ್ತಿದ್ದಾರೆ ಎಂದು ಹೇಳಿದ್ದಾರೆ .

ಭ್ರಾತೃತ್ವದ ಸಂದೇಶ ರವಾನಿಸುವ ಹೊಂದಿರುವ ಈ ಯಾತ್ರೆ ಅತ್ಯಂತ ಅಗತ್ಯವಾಗಿದೆ ಪ್ರಮುಖವಾಗಿ ಜಮ್ಮು-ಕಾಶ್ಮೀರಕ್ಕೆ ಅಗತ್ಯವಿದೆ ಎಂದು ಅವರು ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!