SHOCKING NEWS | ಟಯರ್ ವರ್ಕ್ ಅಂಗಡಿಯಲ್ಲಿ ಏರ್ ಕಂಪ್ರೆಸರ್ ಸ್ಫೋಟ: ಕಾರ್ಮಿಕ ಸಾವು

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ದಕ್ಷಿಣ ಕನ್ನಡ ಜಿಲ್ಲೆಯತ್ತೂರು ತಾಲೂಕಿನ ಉಪ್ಪಿನಂಗಡಿಯ(Uppinangady) ಗಾಂಧಿ ಪಾರ್ಕ್ ಬಳಿ ಟಯರ್ ವರ್ಕ್ ಅಂಗಡಿಯಲ್ಲಿ ಏರ್ ಕಂಪ್ರೆಸರ್ (Tyre compressor) ಸ್ಪೋಟಗೊಂಡು ಕಾರ್ಮಿಕ ಸಾವನ್ನಪ್ಪಿರುವ ಘಟನೆ ನಡೆದಿದೆ.

ಅಲಂಕಾರು ಗ್ರಾಮದ ರಾಜೇಶ್ ಪೂಜಾರಿ(43) ಮೃತ ಕಾರ್ಮಿಕ. ಇಂಡಿಯನ್ ಟಯರ್ ಅಂಗಡಿಯಲ್ಲಿ ಟಯರ್ ರಿಸೋಲ್ ಕೆಲಸದ ವೇಳೆ ಏಕಾಏಕಿ ಕಂಪ್ರೆಸರ್ ಸ್ಫೋಟವಾಗಿದೆ.

ಟಯರ್ ರಿಸೋಲ್ ಮಾಡುತ್ತಿದ್ದಾಗ ಏಕಾಏಕಿ ಏರ್ ಕಂಪ್ರೆಸರ್ ಸ್ಫೋಟವಾಗಿದೆ. ಇದರಿಂದ ತೀವ್ರವಾಗಿ ಗಾಯೊಂಡಿದ್ದ ರಾಜೇಶ್ ಪೂಜಾರಿಯನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದ್ರೆ, ಚಿಕಿತ್ಸೆ ಫಲಕಾರಿಯಾಗದೇ ಕಾರ್ಮಿಕ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾನೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!