ಹೊಸದಿಗಂತ ಡಿಜಿಟಲ್ ಡೆಸ್ಕ್
ವಿವಾಹ ಮಂಟಪದಲ್ಲಿ ಮದುವೆ ಸಂಭ್ರಮದಲ್ಲಿ ಮೈಮರೆತಿದ್ದ ವಧುವನ್ನು ಆಕೆಯ ಪ್ರಿಯಕರನೇ ಗುಂಡಿಕ್ಕಿ ಹತ್ಯೆಗೈದ ದುರಂತ ಘಟನೆ ನೌಜಿಲ್ ಪ್ರದೇಶದ ಮಥುರಾದ ಮುಬಾರಿಕ್ಪುರ ಗ್ರಾಮದಲ್ಲಿ ನಡೆದಿದೆ.
ಕಾಜಲ್ ಮೃತಪಟ್ಟ ದುರಾದೃಷ್ಟವಂತ ವಧು. ಆಕೆಯ ವಿವಾಹವನ್ನು ವೀಕ್ಷಿಸುತ್ತಿದ್ದ ಆಕೆಯ ಪ್ರೇಮಿ ಅನೀಶ್ ಆಕೆ ಮದುವೆ ಮಂಟಪದಲ್ಲಿ ಹೂವಿನ ಹಾರ ಬದಲಾಯಿಸಿಕೊಳ್ಳುವ ಶಾಸ್ತ್ರ ಮುಗಿಸಿದ ಕೂಡಲೇ ಗುಂಡಿಕ್ಕಿ ಕೊಂದಿದ್ದಾನೆ. ಮದುವೆ ಸಂಭ್ರಮವನ್ನು ಕಣ್ತುಂಬಿಕೊಳ್ಳುತ್ತಿದ್ದ ಜನರು ಗುಂಡಿನ ಸದ್ದಿನ ಜೊತೆಗೆ ವಧು ನೆಲಕ್ಕುಳಿದ್ದನ್ನು ಕಂಡು ಬೆಚ್ಚಿಬಿದ್ದಿದ್ದಾರೆ.
ಪೊಲೀಸರ ಪ್ರಕಾರ, ಆರೋಪಿ ವಧುವಿನೊಂದಿಗೆ ಸಂಬಂಧ ಹೊಂದಿದ್ದ. ಮತ್ತು ಆಕೆಯು ಬೇರೊಬ್ಬ ಪುರುಷನನ್ನು ಮದುವೆಯಾಗುತ್ತಿರುವುದನ್ನು ಕಂಡು ಮನನೊಂದಿದ್ದ. ಆಕೆಯ ಹತ್ಯೆಗೆ ಯೋಚಿಸಿದ್ದ ಆತ ಕಂಟ್ರಿಮೇಡ್ ಪಿಸ್ತೂಲ್ನಿಂದ ಗುಂಡುಹಾರಿಸಿ ಕೊಲೆಗೈದಿದ್ದಾನೆ ಎಂದು ಮಾಹಿತಿ ನೀಡಿದ್ದಾರೆ. ಆಕೆಯ ಎಡಗಣ್ಣಿನ ಬಳಿ ಗುಂಡು ತಗುಲಿದ್ದರಿಂದ ಆಕೆ ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ.
ಆರೋಪಿ ಸ್ಥಳದಿಂದ ಪರಾರಿಯಾಗಿದ್ದು, ಆತನ ಪತ್ತೆಗೆ ಶೋಧ ಕಾರ್ಯ ಆರಂಭಿಸಲಾಗಿದೆ.
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ